ಕಲ್ಲಡ್ಕ : ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದ ಎನ್.ಸಿ.ಸಿ.ನೇವಿ ಘಟಕದ ವಿದ್ಯಾರ್ಥಿಗಳಿಗೆ ಮಧುಕರ ಸಭಾಂಗಣದಲ್ಲಿ ಕರ್ಯಾಗಾರ ನಡೆಸಲಾಯಿತು. ಎನ್.ಸಿ.ಸಿ. ಘಟಕದ ತರಬೇತಿದಾರರಾದ ಮಂಗಳೂರು ನೇವಿ ಯುನಿಟ್ನಪಿ.ಎ ಸ್ಟಾಫ್ ಅಮಿತ್ಕುಮಾರ್ ಪಿ.ಒ(ಯು.ಎಸ್) ಮತ್ತು ಪಿ.ಎ ಸ್ಟಾಫ್ ಸಂತೋಷ್ ಕುಮಾರ್ ಪಿ.ಒ ಇವರು ಕರ್ಯಾಗಾರವನ್ನು ನಡೆಸಿಕೊಟ್ಟರು. ಪ್ರೌಢಶಾಲೆಯ ೭೫ ವಿದ್ಯಾರ್ಥಿಗಳು ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಎಲ್ಲರಿಗೆ ಶುಭ ಹಾರೈಸಿದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶಾಂಭವಿ ಮಾತಾಜಿ, ಶಾಲಾ ಎನ್.ಸಿ.ಸಿ.ಘಟಕದ ಪ್ರಮುಖರಾದ ಪುರುಷೋತ್ತಮ ಶ್ರೀಮಾನ್ ಉಪಸ್ಥಿತರಿದ್ದರು.
