ಮೂಡುಬಿದಿರೆ: ಏಪ್ರಿಲ್ 30ರಿಂದ ಮೇ4ರವರೆಗೆ ನಡೆಯಲಿರುವ ಪುತ್ತಿಗೆ ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನದ ಪುನಃ ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅನಾವರಣಗೊಳಿಸಿದರು.
ಪಂಚಾಯಿತಿ ಸದಸ್ಯರಾದ ಮುರಳೀಧರ ಕೋಟ್ಯಾನ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಪಿ, ಕಾರ್ಯಾಧ್ಯಕ್ಷ ಸುಗಂಧ ಕುಮಾರ್, ಉಪಾಧ್ಯಕ್ಷ ಸಂತೋಷ್ ಶೆಟ್ಟಿ, ದಾಮೋದರ ನಾಯಕ್, ಎಂ. ಗಣೇಶ ರಾವ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪಿ, ಕಾರ್ಯದರ್ಶಿ ಸಂತೋಷ್ ನಾಯಕ್, ಹರಿಪ್ರಸಾದ್ ನಾಯಕ್, ದೇವಸ್ಥಾನದ ಅನುವಂಶಿಕ ಆಡಳಿತದಾರರಾದ ರಮೇಶ ನಾಯಕ್, ಕೇಶವ ನಾಯಕ್ ಮತ್ತಿತರರು ಉಪಸ್ಥಿತರಿದ್ದರು
