ಎಳ್ಳಾರೆ :ಎಳ್ಳಾರೆ ಗ್ರಾಮದ ಬಹುವರ್ಷದ ಬೇಡಿಕೆಯಾದ ಬಸ್ಸು ವ್ಯವಸ್ಥೆಯು ಕಡ್ತಲ ಗ್ರಾಮ ಪಂಚಾಯತ್ ನ ಮನವಿಯ ಮೇರೆಗೆ ಹಾಗೂ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಎಳ್ಳಾರೆ ಬಿ. ಸದಾಶಿವ ಪ್ರಭು ಅವರ ವಿಶೇಷ ಮುತುವರ್ಜಿಯಲ್ಲಿ ಆರಂಭಗೊಂಡಿತು.4058407b-baa3-4d9a-a5ae-22e7db74f709

ಬಸ್ಸು ಪ್ರಾರಂಭದ ಪ್ರಥಮ ದಿನದಂದು ಗ್ರಾಮಸ್ಥರೆಲ್ಲರೂ ಸಂತಸದಿಂದ ಬಸ್ಸನ್ನು ಸ್ವಾಗತಿಸಿದರು.ಈ ಸಂದರ್ಭದಲ್ಲಿ ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲತಿ ದಿನೇಶ್ ಕುಲಾಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಕಂಟೆಬೆಟ್ಟು ಸಂಜೀವ ಪೂಜಾರಿ,ಕಡ್ತಲ ಗ್ರಾ.ಪಂ ಮಾಜಿ ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ,ಉದ್ಯಮಿ ಯೋಗೀಶ್ ಮಲ್ಯ, ದಿನೇಶ್ ಕಿಣಿ, ಗ್ರಾಮ ಪಂಚಾಯತ್ ಸದಸ್ಯರಾದ ದೇವೇಂದ್ರ ಕಾಮತ್ ಎಳ್ಳಾರೆ, ಸುಕೇಶ್ ಹೆಗ್ಡೆ, ದೀಪಾ ಡಿ.ಕಿಣಿ,ಅರವಿಂದ ಹೆಗ್ಡೆ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾದ ರವೀಂದ್ರ ಪ್ರಭು,ಅರ್ಚಕ ಶ್ರೀನಿವಾಸ್ ಭಟ್,ಎಳ್ಳಾರೆ ಸುಧಾಕರ್ ಸೇರಿಗಾರ್, ದಿನೇಶ್ ಕುಲಾಲ್,ಹರೀಶ್ ಶೆಟ್ಟಿ,ಪ್ರವೀಣ್ ದೇವಾಡಿಗ, ಅಜಿತ್ ದೇವಾಡಿಗ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *