ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡು ಸಮೀಪದ ಕೈಕುಂಜೆಯಲ್ಲಿ ಇದೇ 20ರಂದು ನಡೆಯಲಿರುವ ‘ಕನ್ನಡ ಭವನ’ ಲೋಕಾರ್ಪಣೆ ಮತ್ತು ಇದೇ 21ರಂದು ನಡೆಯಲಿರುವ ಬಂಟ್ವಾಳ ತಾಲ್ಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಾಲಯವನ್ನು ಸಾಹಿತಿ ಪಲ್ಲವಿ ಕಾರಂತ ಇವರು ಶನಿವಾರ ಉದ್ಘಾಟಿಸಿದರು.

ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಬಸ್ತಿ ವಾಮನ ಶೆಣೈ ಮತ್ತು ಸಮಿತಿ ಅಧ್ಯಕ್ಷ ಐತಪ್ಪ ಆಳ್ವ ಶುಭ ಹಾರೈಸಿದರು.ಕಸಾಪ ಅಧ್ಯಕ್ಷ ಕೆ.ಮೋಹನ ರಾವ್, ಕಟ್ಟಡ ಸಮಿತಿ ಸಂಚಾಲಕ ಕೊಳಕೆ ಗಂಗಾಧರ ಭಟ್, ಪ್ರಮುಖರಾದ ಮಹಾಬಲೇಶ್ವರ ಹೆಬ್ಬಾರ್, ಶಿವಶಂಕರ್, ನಾಗೇಶ್ ರಾವ್, ಕಚೇರಿ ನಿವರ್ಾಹಕ ಜಗದೀಶ್ ಮತ್ತಿತರರು ಇದ್ದರು. ಕಸಾಪ ಗೌರವ ಪ್ರಧಾನ ಕಾರ್ಯದಶರ್ಿ ವಕೀಲ ರವೀಂದ್ರ ಕುಕ್ಕಾಜೆ ಸ್ವಾಗತಿಸಿ, ವಂದಿಸಿದರು.
