ಗಡಿಪ್ರದಾನ ಸಮಾರಂಭ ಕೈಕಂಬ: ಕಂದಾವರ ಗ್ರಾ.ಪಂ.ವ್ಯಾಪ್ತಿಯ ಕಂದಾವರ ಗ್ರಾಮದ ಬೈಲು ಏತಮೊಗರು ಗುತ್ತುವಿನಲ್ಲಿ ಭಾನುವಾರ ಗಡಿಪ್ರದಾನ ಸಮಾರಂಭ ಜರಗಿತು. ಫೆ.15ರಂದು ಸಂಜೆ ಏತಮೊಗರು ಗುತ್ತುವಿನಿಂದ ಭಂಡಾರ ಹೊರಟು ಬೈಲು ಮೂಡುಕರೆ ಧೂಮಾವತಿ ದೈವಸ್ಥಾನಕ್ಕೆ ಬರಲಿದೆ. ಫೆ.16ರಂದು ಬೆಳಿಗ್ಗೆ 9 ಗಂಟೆಗೆ ಧೂಮಾವತಿ ದೈವಸ್ಥಾನದಲ್ಲಿ ತುಡಾರ ಬಲಿ ಮತ್ತು ದೈವ ದರ್ಶನ ಹಾಗೂ ಗಡಿಪ್ರದಾನವು ಬೈಲು ಏತ ಮೊಗರುಗುತ್ತು ಸದಾಶಿವ ಶೆಟ್ಟಿ ಅವರಿಗೆ ನಡೆಯಿತು. ಪೂವರ್ಾಹ್ನ 11 ಗಂಟೆಗೆ ಏತಮೊಗರು ಗುತ್ತು ಚಾವಡಿಯಲ್ಲಿ ಧೂಮಾವತಿ ದೈವಕ್ಕೆ ಹೋಮ ಕಜ್ಜಾಯ, 11.30ಕ್ಕೆ ಗಡಿಪ್ರದಾನ ಚಿಂತನಾ ಸಭಾ ಕಾರ್ಯಕ್ರಮ ನಡೆಯಿತು, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಡಾ.ಸೋಂದಾ ಭಾಸ್ಕರ್ ಭಟ್, ಗುತ್ತು ಮತ್ತು ಗಡಿಯ ಬಗ್ಗೆ ಉಪನ್ಯಾಸ ನೀಡಿದರು. ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಕೊಳಚೂರು ಸುಕುಮಾರ ಶೆಟ್ಟಿ, ಡಾ.ಹಂಸರಾಜ ಆಳ್ವ ಭಾಗವಹಿಸಿದರು. ಮಧ್ಯಾಹ್ನ 1 ಗಂಟೆಯಿಂದ ಅನ್ನಸಂತರ್ಪಣೆ, ಅಪರಾಹ್ನ 3ರಿಂದ ತಾಳಮದ್ದಲೆ ನಡೆಯಿತು.



