Published On: Mon, May 11th, 2020

ತುಂಬೆ ಯಲ್ಲಿ ಅವಶ್ಯ ದಿನ ಬಳಕೆ ವಸ್ತುಗಳ ವಿತರಣೆ 

ಫರಂಗಿಪೇಟೆ : ತುಂಬೆ ಗ್ರಾಮ ದಲ್ಲಿ ಲಾಕ್ ಡೌನ್ ನಿಂದ ಸಂಕಷ್ಟ ಕ್ಕೆ ಒಳಗಾದ ಕುಟುಂಬಗಳಿಗೆ  ಅವಶ್ಯ ದಿನ ಬಳಕೆ ವಸ್ತುಗಳ ವಿತರಣೆ ಮಾಡಲಾಯಿತು  ಸಂಸದ ನಳಿನ್ ಕುಮಾರ್ ಕಟೀಲು ಅವರು ಕೊಡಮಾಡಿದ ಅಕ್ಕಿ ಹಾಗು   ಬಿ ಜೆ ಪಿ ಮಂಗಳೂರು ಮಂಡಲ ದ ವತಿಯಿಂದ ಕೊಡಮಾಡಿದ ಆಹಾರ ಕಿಟ್ ಗಳು ಅಲ್ಲದೆ ದಾನಿಗಳಾದ ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ , ಜಯ ಪ್ರಕಾಶ್ ತುಂಬೆ , ರಾಘವ ಬಂಗೇರ ಪೆರ್ಲ ಬೈಲ್ ಮುಂತಾದ ಗಣ್ಯರಿಂದ  ಸಂಗ್ರಹಿಸಿದ ಸಾಮಗ್ರಿ ಗಳನ್ನು  ಸುಮಾರು 250 ಕ್ಕೂ ಹೆಚ್ಚು ಕುಟುಂಬಗಳಿಗೆ  ವಿತರಿಸಲಾಯಿತು.WhatsApp Image 2020-05-11 at 7.51.35 AM (1)

  ಈ ಸಂದರ್ಭ ದಲ್ಲಿ ಬಿ ಜೆ ಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು , ಬಿ ಜೆ ಪಿ ಮಂಗಳೂರು  ಮಂಡಲ ದ ಅಧ್ಯಕ್ಷರಾದ ಚಂದ್ರಹಾಸ್ ಪಂಡಿತ್ ಹೌಸ್ , ಜಯ ಪ್ರಕಾಶ್ ತುಂಬೆ , ರಾಘವ ಬಂಗೇರ ಪೆರ್ಲ ಬೈಲ್  , ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ , ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ , ಎ ಪಿ ಎಂ ಸಿ ಸದಸ್ಯ ವಿಠ್ಠಲ್ ಸಾಲ್ಯಾನ್ , ಕೃಷ್ಣಪ್ಪ ಪೂಜಾರಿ ಕಲ್ಲಡ್ಕ , ಸೋಮಪ್ಪ ಕೋಟ್ಯಾನ್ ತುಂಬೆ , ರಾಮಲ್ ಕಟ್ಟೆ ಬೂತ್ ಅಧ್ಯಕ್ಷರಾದ ಮನೋಜ್ ಮತ್ತಿತರರು ಉಪಸ್ಥಿತರಿದ್ದರು  ರಾಮಲ್ ಕಟ್ಟೆ ಬೂತ್ ಅಧ್ಯಕ್ಷರ ಮನೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮ ದಲ್ಲಿಅಕ್ಕಿ ಮತ್ತು  ಆಹಾರ ಕಿಟ್ ಗಳನ್ನು ವಿತರಿಸಲಾಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter