ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಎಕ್ಕಾರಿನ ಸಮಸ್ತ ಗ್ರಾಮಸ್ಥರು ಸೇರಿ ಜ.24 ಶುಕ್ರವಾರದಂದು ಸಂಜೆ ಎಕ್ಕಾರು ಶ್ರೀ ಕೊಡಮಣೆತ್ತಾಯ ದೈವಸ್ಥಾನದ ಕಾಣೆಕೆ ಡಬ್ಬಿ ದ್ವಾರದ ಬಳಿ ಪ್ರಾರ್ಥನೆ ಮಾಡಿ ಹೊರೆಕಾಣೆಕೆ ಮೆರವಣೆಗೆ ನಡೆಯಿತು.
ಈ ಸಂದರ್ಭದಲ್ಲಿ ಬಜಪೆ,ಕೈಕಂಬ,ಸುಂಕದಕಟ್ಟೆ,ಪೆರ್ಮುದೆ ಹಾಗೂ ಇತರ ಕಡೆಗಳಿಂದ ಬಂದ ಹೊರೆಕಾಣೆಕೆ ಯು ಭವ್ಯ ಮೆರವಣೆಗೆಯಲ್ಲಿ ಶ್ರೀಕ್ಷೇತ್ರ ಕಟೀಲಿಗೆ ಸಾಗಿತು.


