ಫರಂಗಿಪೇಟೆ : ತ್ಯಾಗದಿಂದ ಸಿಗುವ ಸಂತೋಷ ಭೋಗದಿಂದ ಸಿಗುವುದಿಲ್ಲ ನಾವು ಸೇವಿಸುವ ಆಹಾರದಲ್ಲಿ ಮನಸ್ಸನ್ನು ಪ್ರಚೋದಿಸುವ ಸಾತ್ವಿಕ ಆಹಾರವೇ ಮುಖ್ಯ, ತಾಮಸ ಹಾಗೂ ರಾಜಸ ಗುಣಭರಿತ ಆಹಾರಗಳು ಕೇವಲ ದೇಹದ ತೂಕ ಹೆಚ್ಚಾಗುವಂತೆ ಮಾಡುತ್ತವೆ ಹೊರತು ಬುದ್ಧಿಯ ಪಕ್ವತೆಗೆ ಸಹಕಾರಿಯಲ್ಲ.
ಎಂದು ಶ್ರೀ ಕ್ಷೇತ್ರ ನಾಣ್ಯ ದಲ್ಲಿ ನಡೆಯಲಿರುವ ಅಷ್ಟ ಪವಿತ್ರ ನಾಗಮಂಡಲೋತ್ಸವ ದ ಪೂರ್ವಭಾವಿಯಾದ ನಡೆದ “ದೇವತಾನಮನ” ವೃತಾಚರಣೆ ಕಾರ್ಯಕ್ರಮದಲ್ಲಿ ಉಡುಪಿಯ ಸೋದೆ ಮಠದ ವಿದ್ವಾಂಸರು ಆಗಿರುವ “ಶ್ರೀ ಉದಯ ಸರಳತ್ತಾಯರು ವೃತಾಚರಣೆಯ ದೀಕ್ಷೆಯ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು ದೇವತಾ ನಮನ ಕಾರ್ಯಕ್ರಮ ದಲ್ಲಿ ನೂರಾರು ಭಕ್ತರು ಭಾಗವಹಿಸಿ ವೃತಾಚರಣೆ ದೀಕ್ಷೆ ಪಡೆದರು .
ಈ ಸಂದರ್ಭದಲ್ಲಿ ನಾಗಮಂಡಲೋತ್ಸವ ಸಮಿತಿ ಗೌರಾವಾಧ್ಯಕ್ಷರಾದ ಐತಪ್ಪ ಆಳ್ವ ಸುಜೀರ್ ಗುತ್ತು, ಅಧ್ಯಕ್ಷರಾದ ಪ್ರಕಾಶ್ಚಂದ್ರ ರೈ ದೇವಸ್ಯ , ಕಾರ್ಯಾಧ್ಯಕ್ಷರಾದ ಚಂದ್ರಹಾಸ್ ಶೆಟ್ಟಿ ರಂಗೋಲಿ , ಪ್ರದಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ , ಪ್ರದಾನ ಸಂಚಾಲಕರಾದ ತಾರಾನಾಥ್ ಕೊಟ್ಟಾರಿ ತೇವು,ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪುಂಚಮೆ , ರಾಧಾಕೃಷ್ಣ ತಂತ್ರಿ ಪೊಳಲಿ , ರಾಜಶೇಖರ ಚೌಟ ದೇವಸ್ಯ , ಪೊಳಲಿ ಸುಬ್ರಮಣ್ಯ ತಂತ್ರಿ , ಸುಂದರ ಕುಲಾಲ್ ನಾಣ್ಯ ,ಎಫ್ ಮೋಹನ್ ಕುಲಾಲ್ , ವರದರಾಜ್ ನಾಣ್ಯ , ಜಯಾನಂದ ನಾಯ್ಕ್ ಕುಂಭ್ಡೇಲು , ಮೋಹನ್ ಕುಲಾಲ್ ದೇವರಪಾಲು , ಪದ್ಮನಾಭ ಗೋವಿನತೋಟ , ಹರಿಶ್ಚಂದ್ರ ಆಳ್ವ ಪದೆಂಜಾರು , ದಾಮೋದರ ನಾಣ್ಯ , ದೇವಪ್ಪ ಕುಲಾಲ್ ನಾಣ್ಯ , ಚಂದ್ರಶೇಖರ ತೇಜ , ಮತ್ತಿತರರು ಉಪಸ್ಥಿತರಿದ್ದರು


