ಕೈಕಂಬ:ಮಂಗಳೂರು 2017-18 ನೇಶಾಲಿನಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ ರಾಷ್ಟ್ರೀಯ ಪುರಸ್ಕಾರ ಪಡೆದ ದೇಶದಲ್ಲಿಯೇ ಎರಡನೇ ಸ್ಥಾನ ಪಡೆದ ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ರುಖಿಯಾ, ಉಪಾಧ್ಯಕ್ಷ ಜಿ.ಎಂ. ಉದಯ ಭಟ್, ಪಿಡಿಒ ಅಬೂಬಕರ್ ಅವರನ್ನು ರಾಷ್ಟ್ರೀಯ ದೀನ್ ದಯಾಳ್ ಪಂಚಾಯತ್ ಸಶಕ್ತೀಕರಣ -2019″ ಪರಸ್ಕಾರ ಪಡೆದವರನ್ನು ಮಂಗಳವಾರ ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧದ್ಯಕ್ಷೆ ಕಸ್ತೂರಿ ಪಂಜ , ಸಿಇ ಒ ಡಾ/ ಸೆಲ್ವಮಣಿ ಆರ್ ಅವರು ಸನ್ಮಾನಿಸಿದರು. ಈ ಸಂದರ್ಬದಲ್ಲಿ ಜಿ.ಪಂ. ಸದಸ್ಯ ಯು.ಪಿ.ಇಬ್ರಾಹಿಂ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಯೋಜನೆ ಪುರಸ್ಕಾರ.
ಸದರಿ ಪ್ರಶಸ್ತಿಯು 2017-18ನೇ ಸಾಲಿನಿಂದ ಪರಿಚಯಿಸಲಾಗಿz Éಹಾಗೂ ದೇಶಾಧ್ಯಂತ ಅತ್ಯುತ್ತಮ ಪ್ರದರ್ಶನ ನೀಡುವ ಮೂರು ಗ್ರಾಮ ಪಂಚಾಯತ್ಗಳಿಗೆ ನೀಡಲಾಗಿದೆ. ಜೆ.ಪಿ.ಡಿ. ಗಾಗಿ ಹೊರಡಿಸಿದ ಮಾದರಿಗಳ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಿದ್ದಪಡಿಸಿದ ರಾಜ್ಯ ಮತ್ತು ಕೇಂದ್ರ ಆಡಳಿತ ಪ್ರದೇಶಗಳು ನಿರ್ಧಿಷ್ಟ ಮಾರ್ಗ ಸೂಚಿಗಳ ಪ್ರಕಾರ ತಮ್ಮ ಜಿ.ಪಿ.ಡಿ. ಪಿ ಗಳನ್ನು ಅಭಿವೃದ್ಧಿüಪಡಿಸಿದ ಗ್ರಾಮ ಪಂಚಾಯತ್ಗಳನ್ನು ಪ್ರೋತ್ಸಾಹಿಸುವ ಉ ದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ ಪುರಸ್ಕಾರವು ಗುರುಪುರ ಗ್ರಾಮ ಪಂಚಾಯತಿ, ಮಂಗಳೂರು ತಾಲೂಕು, ದಕ್ಷಿಣಕನ್ನಡ ಜಿಲ್ಲೆಗೆ 2017-18 ನೇ ಶಾಲಿನ ಸಾದನೆಗಾಗಿ ಲಭಿಸಿದೆ.
