ವಾಮಂಜೂರು : ಮಂಗಳೂರು ನಗರ ಪಾಲಿಕೆಯ ೨೦ನೇ ತಿರುವೈಲು ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಾ ಆರ್ ಶೆಟ್ಟಿ ಹಾಗೂ ಕಾರ್ಯಕರ್ತರು ಮಂಗಳವಾರ ವಾಮಂಜೂರು ಚೆಕ್ಪೋಸ್ಟ್ ಹಾಗೂ ಒಳ ಪ್ರದೇಶದಲ್ಲಿ ಮನೆ-ಮನೆ, ಅಂಗಡಿಗಳಿಗೆ ಭೇಟಿ ನೀಡಿ ಮತ ಯಾಚಿಸಿದರು. ಪ್ರತಿಭಾ ಜೊತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು, ಸದಾಶಿವ ಅಮೀನ್, ಪ್ರತಿಮಾ, ಸೈನಾಝ್, ಫ್ರಾನ್ಸಿಸ್, ಹರಿಣಾಕ್ಷಿ ಮತ್ತಿತರರು ಇದ್ದರು.


