ಕೋಲಾರ: ತಾಲ್ಲೂಕು ವ್ಯಾಪ್ತಿಯ ಪಂಚಾಯಿತಿಗಳಲ್ಲಿ ನರೆಗಾ ಕೆಲಸಗಳು ನೀರಿನ ಸಮಸ್ಯೆಗಳು ಮತ್ತು ಅಂಬೇಡ್ಕರ್ ವಸತಿ ಯೋಜನೆಗಳಲ್ಲಿ ಸಾಕಷ್ಟು ಸಮಸ್ಯೆಗಳು ಕಣ್ಣಿಗೆ ಕಾಣುತ್ತಿದ್ದರು. ಸಂಬಂಧಪಟ್ಟ ಪಿಡಿಒಗಳು ಯಾವುದೇ ಕ್ರಮ ಕೈಗೊಳ್ಳದೆ ಜಾಣಕುರುಡರಂತೆ ವರ್ತಿಸುತ್ತಿದ್ದಾರೆ. ಆದ್ದರಿಂದ ತಾವುಗಳು ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಬೇಟಿಕೊಟ್ಟು ಈ ಮಾದರಿ ಸಮಸ್ಯೆಗಳನ್ನು ಕೂಲಂಕುಶಿತವಾಗಿ ಪರಿಶೀಲನೆ ಮಾಡಿ ವಸತಿ. ನೀರಿನ ಸೌಲಭ್ಯಗಳಿಲ್ಲದೆ ನೊಂದ ಕುಟುಂಬಗಳಿಗೆ ನ್ಯಾಯ ದೊರಕಿಸಿ. ತಪ್ಪತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲ್ಲೂಕು ಪಂಚಾಯಿತಿ ಮುಂಭಾಗದಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಯುವಸೇನೆ ಕರುನಾಡು ಸಂಘದ ವತಿಂಯಿಂದ ಮನವಿ ನೀಡಲಾಯಿತು.

ಈ ಸಂಧರ್ಭದಲ್ಲಿ ಯುವಸೇನೆ ಕರುನಾಡು ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಚಿನ್ನಾಪುರ ಅನಿಲ್ಕುಮಾರ್. ರಾಜ್ಯಧ್ಯಕ್ಷರಾದ ಕಲ್ಯಾಣ್ಕುಮಾರ್. ಜಿಲ್ಲಾಧ್ಯಕ್ಷ ಸೋಮಸಂದ್ರ ಶಿವರಾಜ್.ರಾಜ್ಯ ಸಂಘಟನೆ ಕಾರ್ಯದಶಿ ಹೋಳೂರು ಮಂಜುನಾಥ್. ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶ್ಯಾಮಲಾ ಅಂಬರೀಶ್. ಮಹಿಳಾ ಉಪಾಧ್ಯಕ್ಷರಾದ ಆಶಾ ಶಿವರಾಜ್ ರಾಜ್ಯ ಉಪಾಧ್ಯಕ್ಷರಾದ ಯತೀಶ್ ಸತ್ಯಪ್ಪ ನವರ್. ರಾಜ್ಯ ಉಪಾಧ್ಯಕ್ಷರಾದ ಪ್ರದೀಪ್. ತಾಲ್ಲೂಕು ಅಧ್ಯಕ್ಷರಾದ ಈಕಂಬಳ್ಳಿ ಮಂಜುನಾಥ್ ಮುಂತಾದವರಿದ್ದರು.
