ಬಂಟ್ವಾಳ : ಆಟಿ ಅಮವ್ಯಾಸ್ಯೆಯ ಪವಿತ್ರ ದಿನವಾದ ಆಗಸ್ತ್ 1 ರಂದು ಬಂಟ್ವಾಳ ತಾಲೂಕು ತು ಳು ಕೂಟ ವತಿಯಿಂದ ರಕ್ತೇ ಶ್ವರೀ ದೇವಿ ದೇವಸ್ಥಾನದ ಆಡಳಿತ ಮಂಡಳಿ ಸಹಕಾರದೊಂದಿಗೆ ಬಿ.ಸಿ.ರೋಡ್ ಶ್ರೀ ರಕ್ತೇ ಶ್ವರೀ ಸನ್ನಿಧಿಯಲ್ಲಿ ಪಾಲೆದ ಕೆತ್ತೆ ಕಷಾಯ ವಿತರಣೆ ಕಾರ್ಯಕ್ರಮ ಬೆಳಿಗ್ಗೆ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತು ಳು ಕೂಟದ ಅಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ ತು ಳು ಸಂಸ್ಕøತಿಯನ್ನು ಬಿಂಬಿಸುವ ಈ ಆಚರಣೆಗಳು ವೈಜ್ಞಾನಿಕವಾಗಿಯೂ ಮಹತ್ವ ಪಡೆದಿದ್ದು ಆರೋಗ್ಯವರ್ಧನೆಗೂ ಕಷಾಯ ಸೇವನೆ ಸಹಕಾರಿಯಾಗಲಿದೆ ಎಂದರು. ಬೆಳಿಗ್ಗೆ 6ಗಂಟೆಯಿಂದ ಆರಂಭಗೊಂಡ ಈ ಕಾರ್ಯಕ್ರಮಕ್ಕೆ 500ಕ್ಕೂ ಮಿಕ್ಕಿ ಆಗಮಿಸಿದವರಿಗೆ ಕಷಾಯ ವಿತರಣೆ ಮಾಡಲಾಯಿತು.
ರಕ್ತೇ ಶ್ವರಿ ದೇವಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ರಾಜೇಶ್ ಎಲ್.ನಾಯಕ್, ಕಾರ್ಯದರ್ಶಿ ಎನ್.ಶಿವಶಂಕರ್, ತು ಳು ಕೂಟ ಕಾರ್ಯದರ್ಶಿ ಎಚ್ಕೆ.ನಯನಾಡು, ಸುಭಾ ಶ್ಚಂದ್ರ ಜೈನ್, ಸೇಸಪ್ಪ ಮಾಸ್ತರ್, ಪ್ರಕಾಶ್ ಬಿ.ಶೆಟ್ಟಿ ಶ್ರೀ ಶೈಲತುಂಬೆ, ಸೀತಾರಾಮ ಶೆಟ್ಟಿ ಕಾಂತಾಡಿಗುತ್ತು, ನಾರಾಯಣ ಸಿ.ಪೆರ್ನೆ, ಸದಾಶಿವ ಪುತ್ರನ್, ಸುಕುಮಾರ್, ನೀಲೋಜಿರಾವ್,ಕೈಯೂರು ನಾರಾಯಣ ಭಟ್, ದೇವಪ್ಪ ಕುಲಾಲ್ ಪಂಜಿಕಲ್, ಕೆ.ಎಚ್.ಅಬುಬಕ್ಕರ್, ಗೋಪಾಲ್ ಕೃಷ್ಣ ತುಂಬೆ, ಮಚ್ಚೆಂದ್ರ ನಾಥ ಸಾಲ್ಯಾನ್ , ಸತೀಶ್ ಎಸ್. ಕುಮಾರ್ ಉಪಸ್ಥಿತರಿದ್ದರು.
