ಕಟೀಲು: ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇವಸ್ಥಾನದಲ್ಲಿ ವಿಜಯಾ ಬ್ಯಾಂಕ್ ನಿಂದ ಕೊಡಮಾಡಲ್ಪಟ್ಟ ಎರಡು ವಿಐಪಿ ಕೊಠಡಿಯನ್ನು ಗುರುವಾರ ಬ್ಯಾಂಕ್ ಆಪ್ ಬರೋಡ ವಲಯ ಮುಖ್ಯಸ್ಥರಾದ ಎಂ.ಜೆ ನಾಗರಾಜ್ ಉದ್ಘಟಿಸಿದರು. ಬ್ಯಾಂಕ್ ವತಿಯಿಂದ 8.50 ಲಕ್ಷ ಮತ್ತು ದೇವಳದ ವತಿಯಿಂದ. 1.50 ರೂ ಒಟ್ಟು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕೊಠಡಿ ನಿರ್ಮಾಣಗೊಂಡಿದೆ.
ಕಾರ್ಯಕ್ರಮದಲ್ಲಿ ದೇವಳದ ಮುಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ, ಸುದೀರ್ ಶೆಟ್ಟಿ ಕೊಡೆತ್ತೂರುಗುತ್ತು, ಪ್ರಬಂಧಕ ತಾರನಾಥ ಶೆಟ್ಟಿ, ಉಪವಲಯ ಮುಖ್ಯಸ್ಥ, ಎಸ್.ಎಸ್ ರಾಮಚಂದ್ರ, ಪ್ರಾದೇಶಿಕ ಮುಖ್ಯಸ್ಥ ಶಿವರಾಮ ಡಿ, ಉಪವಲಯ ಪ್ರಾದೇಶಿಕ ಮುಖ್ಯಸ್ಥ ಚಿದಾನಂದ ಹೆಗ್ಡೆ, ಕಟೀಲು ಶಾಖಾ ಪ್ರಬಂಧಕ ಶ್ಯಾಮ್ ಸ್ವರೂಪ್, ಬಜಪೆ ಶಾಖಾ ಪ್ರಬಂಧಕ ರೋಹನ್, ಕಿನ್ನಿಗೋಳಿ ಶಾಖಾ ಪ್ರಬಂಧಕ ಶಿಲ್ಪಾ ಗದಗ, ಪ್ರಸಾದ್ ಶೆಟ್ಟಿ, ಗುತ್ತಿಗೆದಾರ ಅನಿಲ್ ಕುಮಾರ್ ಮೂಲ್ಕಿ ಮತ್ತಿತರು ಉಪಸ್ಥಿತರಿದ್ದರು.

