ಬಂಟ್ವಾಳ: ಕೇರಳ ರಾಜ್ಯದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಪರವಾಗಿ ಮಾಜಿ ಸಚಿವ ರಮಾನಾಥ ರೈ ಅವರು ಬಿರುಸಿನ ಪ್ರಚಾರಗೈದರು. ತುಳು ಮತ್ತು ಕನ್ನಡ ಭಾಷಿಕರೇ ಹೆಚ್ಚಾಗಿರುವ ವಯನಾಡಿನ ಕಲ್ಪಟ್ಟ ಪ್ರದೇಶದಲ್ಲಿ ರಮಾನಾಥ ರೈ ಅವರು ಮತಯಾಚನೆಗೈದರು.
ಜಿಪಂ ಸದಸ್ಯರಾದ ಪದ್ಮಶೇಖರ ಜೈನ್, ಎಂ.ಎಸ್.ಮಹಮ್ಮದ್,ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್,ಪುತ್ತೂರು ಯುವ ಕಾಂಗ್ರೆಸ್ ನ ದಿನೇಶ್ ಯಾದವ,ವಿಠಲಶೆಟ್ಟಿ ಮೊದಲಾದವರು ರೈ ಅವರಿಗೆ ಸಾಥ್ ನೀಡಿದರು.