ಮುಂಬಯಿ: ಮಹಾನಗರದಲ್ಲಿನ ಸಮುದಾಯದ ಪ್ರತಿಷ್ಠಿತ ಸಂಸ್ಥೆಯಲ್ಲೊಂದಾದ ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ತನ್ನ ವಾರ್ಷಿಕ ವಿಶೇಷ ಸಭೆಯು ಕಛೇರಿಯಲ್ಲಿ ನಡೆಯಿತು.

ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಇದರ 2018-2019ರ ಸಾಲಿನ ನೂತನ ಅಧ್ಯಕ್ಷರಾಗಿ ರಾಜ್ಕುಮಾರ್ ಕಾರ್ನಾಡ್ ಪುನಾರಾಯ್ಕೆ ಗೊಂಡರು.
ಸಂಘದ ಉಪಾಧ್ಯಕ್ಷರಾಗಿ ಎನ್.ರವೀಂದ್ರನಾಥ್ ರಾವ್, ಗೌ| ಪ್ರ| ಕಾರ್ಯದರ್ಶಿ ಕೇದರ್ನಾಥ ಆರ್.ಬೋಳಾರ್, ಕೋಶಾಧಿಕಾರಿ ಆಗಿ ನವೀನ್ ಎಸ್.ರಾವ್, ಜೊತೆ ಕಾರ್ಯದರ್ಶಿಗಳಾಗಿ ರಿತೇಶ್ ಆರ್.ರಾವ್ ಮತ್ತು ನಿತ್ಯಾನಂದ ಸಿ.ರಾವ್ ಹಾಗೂ ಜೊತೆ ಕೋಶಾಧಿಕಾರಿ ಆಗಿ ರೂಪೇಶ್ ಆರ್.ರಾವ್ ಆಯ್ಕೆ ಗೊಂಡರು.



