ಬೆಳ್ಳೂರು: ಬಂಡಾರಮನೆಯ ಕುಟುಂಬಸ್ಥರ ನಾಗಬನದಲ್ಲಿ ಎ. 1ರಂದು ಭಾನುವಾರ ಬ್ರಹ್ಮಶ್ರೀ ಉದಯಪಾಂಗಣ್ಣಾಯ ಹಾಗೂ ಪ್ರಕಾಶ್ ಭಟ್ ಇವರ ನೇತೃತ್ವದಲ್ಲಿ“ನಾಗದೇವರ ಪ್ರತಿಷ್ಠೆ ,ಕಲಾಶಾಭಿಷೇಕ,ಪರಿವಾರ ದೈವಗಳ ಪ್ರತಿಷ್ಠೆ ಹಾಗೂ ಕಲಶಾಭಿಷೇಕ” ನಡೆಯಿತು.
ಮಾ.31 ರಂದು ಶನಿವಾರ ನಾಗದೇವರ ಆರೂಢ ಪರಿಗ್ರಹ, ದೇವತಾ ಪ್ರಾರ್ಥನೆ,ವಾಸ್ತು ಪೂಜೆ,ವಾಸ್ತು ಹೋಮ,ದಿಕ್ಪಾಲಬಲಿ,ನಾಗದೇವರ ಬಿಂಬಾಧಿವಾಸ ಮತ್ತು ದೈವಗಳ ಕಟ್ಟೆಯಲ್ಲಿ ವಾಸ್ತು ಪೂಜೆ,ಸುದರ್ಶನ ಹೋಮ ಹಾಗೂ ದೈವಗಳ ಪ್ರತಿಷ್ಠೆ ನಡೆಯಿತು.
ಭಾನುವಾರ ಪ್ರತಿಷ್ಠಾ ಹೋಮ, ಪ್ರಧಾನ ಹೋಮ, ಕಲಶಾಭಿಷೇಕ. ನಾಗದೇವರ ಪ್ರತಿಷ್ಠೆ, ಕಲಶಾಭಿಷೇಕ, ಆಶ್ಲೇಷ ಬಲಿ, ಪ್ರಸನ್ನ ಪೂಜೆ ನಡೆದ ಬಳಿಕ ಅನ್ನ ಸಂತರ್ಪಣೆ ನಡೆಯಿತು. ಪೊಳಲಿ ರಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಪ್ರಸಾದ ಸ್ವೀಕರಿಸಿದರು.
ಬಂಡಾರಮನೆಯ ಸೀತಾರಾಮ ಶೆಟ್ಟಿ, ಬೂಬ ಅಜಿಲ ಹಾಗೂ ಚಂದ್ರಶೇಖರ ಅಜಿಲ ಕುಟುಂಬಸ್ಥರು ಇದ್ದರು.


