ಬಜಪೆ: ಬಡಗ ಎಡಪದವು ಗ್ರಾಮದ ದಿನೇಶ್ ದೇವಾಡಿಗ ಅವರಿಗೆ ಅನಾರೋಗ್ಯ ಚಿಕಿತ್ಸೆಯ ಸಲುವಾಗಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಬಿ.ಎ.ಮೊೈದಿನ್ ಬಾವ ಅವರು ಮುಖ್ಯ ಮಂತ್ರಿ ಪರಿಹಾರ ನಿಧಿ 25ಸಾವಿರ ರೂ.ಗಳ ಚೆಕ್ಕನ್ನು ದಿನೇಶ್ ದೇವಾಡಿಗ ಅವರ ಪತ್ನಿ ಸೇವಂತಿ ಅವರಿಗೆ ಹಸ್ತಾಂತರಿಸಿದರು. ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ ಪ್ರಥ್ವಿರಾಜ್ ಮಾಜಿ ಜಿ.ಪಂ ಸದಸ್ಯ ಕೃಷ್ಣ ಅಮೀನ್ ಮಾಜಿ ಜಿ.ಪಂ ಸದಸ್ಯ ನಾರ್ಬರ್ಟ್ ಮಥಾಯಸ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥತಿದ್ದರು.

