ವಾರಾಣಸಿ ಮಾ.25 : ನರೇಂದ್ರ ಮೋದಿ ವಿರುದ್ಧ ಇಲ್ಲಿ ಸ್ಪರ್ಧಿಸಬೇಕೆ ಬೇಡವೇ ಎಂದು ಜನತೆಯ ಅಭಿಪ್ರಾಯವನ್ನ ಕೇಳಲು ಬಂದಿರುವ ಮಾಜಿ ಡೆಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್’ಗೆ ಭಾರೀ ಪ್ರತಿಭಟನೆಗಳ ಸ್ವಾಗತ ವಾರಾಣಸಿ ನರೇಂದ್ರ ಮೋದಿ ವಿರುದ್ಧ ಇಲ್ಲಿ ಸ್ಪರ್ಧಿಸಬೇಕೆ ಬೇಡವೇ ಎಂದು ಜನತೆಯ ಅಭಿಪ್ರಾಯವನ್ನ ಕೇಳಲು ಬಂದಿರುವ ಮಾಜಿ ಡೆಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್’ಗೆ ಭಾರೀ ಪ್ರತಿಭಟನೆಗಳ ಸ್ವಾಗತ ಸಿಕ್ಕಿದೆ. ವಾರಾಣಸಿಯ ಎರಡು ಸ್ಥಳಗಳಲ್ಲಿ ಕೇಜ್ರಿವಾಲ್ ಮೇಲೆ ದುಷ್ಕರ್ಮಿಗಳು ಮೊಟ್ಟೆ ಮತ್ತು ಶಾಹಿ ಎಸೆದ ಘಟನೆ ವರದಿಯಾಗಿದೆ.
ಕೇಜ್ರಿವಾಲ್ ಹೋದಲೆಲ್ಲಾ ಬಿಜೆಪಿ ಕಾರ್ಯಕರ್ತರು “ಕೇಜ್ರಿವಾಲ್ ವಾಪಸ್ ವಾವೋ”, “ಕೇಜ್ರಿವಾಲ್ ಮುರ್ದಾಬಾದ್” ಮುಂತಾದ ಧಿಕ್ಕಾರದ ಘೋಷಣೆಗಳನ್ನ ಮೊಳಗಿಸಿದ್ದಾರೆ. ಮಸಿ ಎರಚಿದರು.. ಇಲ್ಲಿ ರೋಡ್ ಶೋ ನಡೆಸಲು ಬಂದಿದ್ದ ಅರವಿಂದ್ ಕೇಜ್ರಿವಾಲ್’ಗೆ ಜನರ ಗುಂಪೊಂದು ಇಂಕು ಎಸೆದು ದುರ್ವರ್ತನೆ ತೋರಿದೆ. ಕೇಜ್ರಿವಾಲ್’ಗಷ್ಟೇ ಅಲ್ಲ, ಆಮ್ ಆದ್ಮಿ ಪಕ್ಷದ ಇತರ ಮುಖಂಡರಾದ ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್ ಅವರಿಗೂ ಮಸಿ ಮೆತ್ತಿದ್ದವು. ಪುಂಡ ಜನರ ಗುಂಪನ್ನ ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು. ಮೊಟ್ಟೆ ಹೊಡೆದರು… ಇಲ್ಲಿ ಗಂಗೆಯಲ್ಲಿ ಸ್ನಾನ ಮಾಡಿ ರೋಡ್ ಶೋ ನಡೆಸಲು ಕಾರಲ್ಲಿ ತೆರಳುತ್ತಿದ್ದ ಅರವಿಂದ್ ಕೇಜ್ರಿವಾಲ್’ಗೆ ಮೊಟ್ಟೆಗಳ ಸ್ವಾಗತ ಸಿಕ್ಕಿತು. ರಸ್ತೆ ಬದಿಯಿಂದ ಜನರು ಕೇಜ್ರಿವಾಲ್ ಕಾರಿಗೆ ಮೊಟ್ಟೆಗಳನ್ನ ಹೊಡೆದರು. ಕೇಜ್ರಿವಾಲ್ ಅವರು ನರೇಂದ್ರ ಮೋದಿ ವಿರುದ್ಧ ವಾರಾಣಸಿ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತ. ಇಂದು ಇಲ್ಲಿ ತನ್ನ ವಿರುದ್ಧವಾಗಿ ನಡೆದ ಘಟನೆಗಳನ್ನ ಕೇಜ್ರಿವಾಲ್ ತನ್ನ ಅನುಕೂಲಕ್ಕಾಗಿ ಬಳಸಿಕೊಳ್ಳಲು ಯತ್ನಿಸಬಹುದು ಎಂದು ಮೂಲಗಳು ಹೇಳುತ್ತಿವೆ.ಸಿಕ್ಕಿದೆ. ವಾರಾಣಸಿಯ ಎರಡು ಸ್ಥಳಗಳಲ್ಲಿ ಕೇಜ್ರಿವಾಲ್ ಮೇಲೆ ದುಷ್ಕರ್ಮಿಗಳು ಮೊಟ್ಟೆ ಮತ್ತು ಶಾಹಿ ಎಸೆದ ಘಟನೆ ವರದಿಯಾಗಿದೆ. ಕೇಜ್ರಿವಾಲ್ ಹೋದಲೆಲ್ಲಾ ಬಿಜೆಪಿ ಕಾರ್ಯಕರ್ತರು “ಕೇಜ್ರಿವಾಲ್ ವಾಪಸ್ ವಾವೋ”, “ಕೇಜ್ರಿವಾಲ್ ಮುರ್ದಾಬಾದ್” ಮುಂತಾದ ಧಿಕ್ಕಾರದ ಘೋಷಣೆಗಳನ್ನ ಮೊಳಗಿಸಿದ್ದಾರೆ. ಮಸಿ ಎರಚಿದರು.. ಇಲ್ಲಿ ರೋಡ್ ಶೋ ನಡೆಸಲು ಬಂದಿದ್ದ ಅರವಿಂದ್ ಕೇಜ್ರಿವಾಲ್’ಗೆ ಜನರ ಗುಂಪೊಂದು ಇಂಕು ಎಸೆದು ದುರ್ವರ್ತನೆ ತೋರಿದೆ. ಕೇಜ್ರಿವಾಲ್’ಗಷ್ಟೇ ಅಲ್ಲ, ಆಮ್ ಆದ್ಮಿ ಪಕ್ಷದ ಇತರ ಮುಖಂಡರಾದ ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್ ಅವರಿಗೂ ಮಸಿ ಮೆತ್ತಿದ್ದವು. ಪುಂಡ ಜನರ ಗುಂಪನ್ನ ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು. ಮೊಟ್ಟೆ ಹೊಡೆದರು. ಇಲ್ಲಿ ಗಂಗೆಯಲ್ಲಿ ಸ್ನಾನ ಮಾಡಿ ರೋಡ್ ಶೋ ನಡೆಸಲು ಕಾರಲ್ಲಿ ತೆರಳುತ್ತಿದ್ದ ಅರವಿಂದ್ ಕೇಜ್ರಿವಾಲ್’ಗೆ ಮೊಟ್ಟೆಗಳ ಸ್ವಾಗತ ಸಿಕ್ಕಿತು. ರಸ್ತೆ ಬದಿಯಿಂದ ಜನರು ಕೇಜ್ರಿವಾಲ್ ಕಾರಿಗೆ ಮೊಟ್ಟೆಗಳನ್ನ ಹೊಡೆದರು. ಕೇಜ್ರಿವಾಲ್ ಅವರು ನರೇಂದ್ರ ಮೋದಿ ವಿರುದ್ಧ ವಾರಾಣಸಿ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತ. ಇಂದು ಇಲ್ಲಿ ತನ್ನ ವಿರುದ್ಧವಾಗಿ ನಡೆದ ಘಟನೆಗಳನ್ನ ಕೇಜ್ರಿವಾಲ್ ತನ್ನ ಅನುಕೂಲಕ್ಕಾಗಿ ಬಳಸಿಕೊಳ್ಳಲು ಯತ್ನಿಸಬಹುದು ಎಂದು ಮೂಲಗಳು ಹೇಳುತ್ತಿವೆ.


