ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂರುಕಾವೇರಿ ಮಾರಡ್ಕದಿಂದ ಕಟೀಲು ಚರ್ಚ್ ತನಕದ ರಾಜ್ಯ ಹೆದ್ದಾರಿಗೆ ಸ್ವಯಂ ಚಾಲಿತ ದಾರಿ ದೀಪದ ಉದ್ಘಾಟನಾ ಸಮಾರಂಭ ಬಲ್ಲಾಣದಲ್ಲಿ ನಡೆಯಿತು. ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ಚಾಲನೆ ನೀಡಿ ಮಾತನಾಡಿದ ಅವರು ಗ್ರಾ. ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು ಐದು ವರ್ಷದ ಅವಧಿಯಲ್ಲಿ ಮೆನ್ನಬೇಟು ಪಂಚಾಯತ್ ವ್ಯಾಪ್ತಿಯಲ್ಲಿ ಅನೇಕ ಕೆಲಸಗಳು ನಡೆದಿದೆ, ಮುಂದಿನ ದಿನಗಳಲ್ಲಿ ಮೆನ್ನಬೆಟ್ಟು ಮಾದರಿ ಗ್ರಾಮವಾಗಿ ರೂಪುಗೊಳ್ಲಲಿದೆ ಎಂದರು.

ಈ ಸಂದರ್ಭ ಉಪಾಧ್ಯಕ್ಷೆ ಸರೋಜಿನಿ, ಜಿ. ಪಂ. ಸದಸ್ಯರಾದ ಈಶ್ವರ್ ಕಟೀಲ್, ಗ್ರಾ. ಪಂ. ಸದಸ್ಯರಾದ ಗಂಗಾಧರ ಪೂಜಾರಿ, ರೋಸಿ ಪಿಂಟೋ, ರಾಜೀವಿ, ಕೃಷ್ಣಪ್ಪ , ಜಯಶಂಕರ್ ರೈ, ಹರಿಶ್ಚಂದ್ರ ರಾವ್, ಡೋಲಿ ಸಂತು ಮಾಯಾರ್ , ಶಾಂತಿ ಸಲ್ದಾನಾ, ಲೂಕಸ್ ಸಲ್ದಾನ್, ಅನಿತಾ ಅರಾಹ್ನ , ಸದಾಶಿವ ಮತ್ತಿತರರಿದ್ದರು.
