
ಸುದ್ದಿ 9 ಕೈಕಂಬ;
ಎತ್ತಿನಹೊಳೆ ಯೋಜನೆ ವಿರೋಧಿಸಿ ನೇತ್ರವತಿ ರಕ್ಷಣಾ ಸಮಿತಿ ನೇತೃತ್ವದಲ್ಲಿ ಮಾ .3ರಂದು ದಕ್ಷೀಣ ಕನ್ನಡ ಜಿಲ್ಲಾ ಬಂದ್ಗೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ಕೈಕಂಬ ಅಟೋ ರಿಕ್ಷಾ ಚಾಲಕ ಮಾಲಕರು ಸಂಪೂರ್ಣ ಬೆಂಬಲ ನೀಡಿ ಸ್ವಯಂಪ್ರೇರಿತವಾಗಿ ಯವುದೇ ಎಲ್ಲಾ ರಿಕ್ಷಾಗಳನ್ನು ಚಲಾಯಿಸದೇ ಶ್ರಮದಾನದ ಮೂಲಕ ಬಸ್ಸು ನಿಲ್ದಾಣಗಳನ್ನು ಸ್ವಚ್ಚತೆ ಮಾಡಿದರು. ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಕೇಶವ, ಗ್ವಾರವಧ್ಯಕ್ಷ ರವೀಂದ್ರ, ಉದಯ, ಭರತ್, ಶಿವರಾಮ್ , ಸತೀಶ, ಕಿಶೋರ್ ,ಅಶೋಕ್ , ಇಬ್ರಾಹಿಂ ಮತ್ತು ಸಂಘದ ಸದಸ್ಯರು ಸ್ವಚ್ಚತೆ ಮಾಡುವಲ್ಲಿ ತೊಡಗಿದರು.


