ಕಲ್ಲಡ್ಕ: ಶ್ರೀ ರಾಮ ಸೆಕೆಂಡರಿ ಸ್ಕೂಲ್‌ ಕಲ್ಲಡ್ಕದಲ್ಲಿ NEET, JEE, CET, CA, CPT, CS ವಿಷಯಗಳಿಗೆ ಸಂಬಂಧಿಸಿದಂತೆ “foundation course”ಪ್ರಾರಂಭಿಸಲಾಯಿತು. ಡಾ ಪ್ರಭಾಕರ ಭಟ್‌ ಕಲ್ಲಡ್ಕ ಇವರು ಈ ತರಗತಿಗಳ ಆರಂಭೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ನುರಿತ ತಜ್ಞರಾದ ಡಾ. ಶೃತ ಕೀರ್ತಿ ತರಬೇತಿಯನ್ನು ನಡೆಸಿಕೊಟ್ಟರು.

ಕಾರ‍್ಯಕ್ರಮದಲ್ಲಿ ಸಂಚಾಲಕರಾದ ಶ್ರೀ ವಸಂತ ಮಾಧವ, ಉಪಪ್ರಾಂಶುಪಾಲರಾದ ತಿರುಮಲೇಶ್ವರ ಪ್ರಶಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ವೇತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು. ಬೋಧಕ ಹಾಗೂ ಬೋಧಕೇತರರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *