ಕಿನ್ನಿಗೋಳಿ : ಸಾಮೂಹಿಕ ಪ್ರಾರ್ಥನೆ ಹಾಗೂ ಪಾದಯಾತ್ರೆ ಮೂಲಕ ಭಗವಂತನ ಸಾಕ್ಷತ್ಕಾರ ಪಡೆದು ಜೀವನ ಸಾರ್ಥಕ ಮಾಡಬಹುದು ಎಂದು ಕೊಂಡೆವೂರು ಶ್ರೀ ಸ್ವಾಮೀಜಿ ಹೇಳಿದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಜನವರಿ ೨೨ರಿಂದ ಫೆಬ್ರವರಿ ೩ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಭಾನುವಾರ ನಡೆಯಲಿರುವ ಶಾಕಲ ಋಕ್ ಸಂಹಿತಾ ಯಾಗಕ್ಕೆ ಹಾಗೂ ಕೋಟಿ ಜಪ ಯಾಗಕ್ಕೆ ಮೂರುಕಾವೇರಿಯಿಂದ ಹೊರಟ ಪಾದಯಾತ್ರೆ ಸಂದರ್ಭ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

WhatsApp Image 2019-12-15 at 16.07.32

WhatsApp Image 2019-12-15 at 16.22.13 (1)

WhatsApp Image 2019-12-15 at 16.22.13

 

WhatsApp Image 2019-12-15 at 16.22.14
ಈ ಸಂದರ್ಭ ಮೂಲ್ಕಿ ಮೂಡಬಿದಿರೆ ಶಾಸಕ ಉಮನಾಥ ಕೋಟ್ಯಾನ್ಕ ಟೀಲು ದೇವಳ ಅರ್ಚಕ ವೆಂಕಟರಮಣ ಆಸ್ರಣ್ಣ , ಉಡುಪಿ ಬಿಜೆಪಿ ಯ ಗೀತಾಂಜಲಿ ಸುವರ್ಣ , ಕೆ.ಭುವನಾಭಿರಾಮ ಉಡುಪ, ಪ್ರಥ್ವಿರಾಜ ಆಚಾರ್ಯ, ಡಾ. ಗಣೇಶ್ ಅಮೀನ್ ಸಂಕಮಾರ್, ಕೃಷ್ಣ ಮಾರ್ಲ, ರಘುವೀರ ಕಾಮತ್, ದಾಮೋದರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸಾವಿರಾರು ಜನರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *