ಕೈಕಂಬ: ಟ್ರೂ ವಿಷನ್ ಕೈಕಂಬದಲ್ಲಿ ಹದಿಮೂರು ವರ್ಷಗಳಿಂದ ತನ್ನ ಉಧ್ಯಮವನ್ನು ನಡೆಸಿಕೊಂಡು ಬಂದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದರ ವ್ಯವಸ್ಥಾಪಕಿ ರೂಪ ಆರ್ ಶೆಟ್ಟಿ ಅವರು ಟ್ರೂ ವಿಷನ್ ಒಪ್ಟಿಕಲ್ ಕೈಗೆಟಕುವಂತೆ ಗ್ರಾಮಾಂತರ ಭಾಗದ ಗ್ರಾಹಕರಿಗೆ ಅನೂಕೂಲವಾಗುವಂತೆ ಇನ್ನೊಂದು ಹೆಜ್ಜೆ ಇಟ್ಟಿದ್ದಾರೆ .ಇದರ ಅಂಗಸಸ್ಥೆಯನ್ನು ಆಸುಪಾಸಿನ ಗ್ರಾಮಸ್ಥರಿಗೂ ಅನೂಕೂಲವಾಗುವಂತೆ ಗಂಜಿಮಠ ಹೃದಯಭಾಗದ ಮಳಲಿ ಕ್ರಾಸ್ ಎಸ್ .ಎಲ್ .ಆರ್ಕೇಡ್ನಲ್ಲಿ ಅ.1ರಂದು ಶುಕ್ರವಾರ ಪ್ರಂರಾಬಿಸಿದ್ದಾರೆ.
ನುರಿತ ತಜ್ಙರಿಂದ ಉಚಿತ ಕಣ್ಣು ಪರೀಕ್ಷೆ ಮಾಡುವಂತ ವ್ಯವಸ್ಥೆ ಇದೆ. ಈ ಶುಭಾರಂಭದಲ್ಲಿ ಹಲಾವಾರು ಗಣ್ಯರು ಸಂಸ್ಥೆಗೆ ಶುಭ ಹಾರೈಸಿದ್ದಾರೆ. ವಿಜಯಬ್ಯಾಂಕ್ ನಿವೃತ ಎ.ಜಿ.ಎಂ ರಾಜರಾಮ್ ಶೆಟ್ಟಿ,ನವನೀತ್ ಶೆಟ್ಟಿ ,ಜಯಪ್ರಕಾಶ್ ಭಂಡಾರಿ ಪಿಲಿಕುಳ, ಡಾ. ಶ್ರೀಪತಿ ಕಿನ್ನಿಕಂಬಳ , ಡಾ.ವಸಂತಿ ಬಂಗೇರಾ ಕೆ.ಎಸ್ ಹೆಗ್ಡೆ , ವಿದ್ಯಾಶ್ರೀ ರಾಧಕೃಷ್ಣ , ಮುಂಡಬೆಟ್ಟು ಗುತ್ತು ನರಸಿಂಹ ರೈ, ಉಧ್ಯಮಿಗಳಾದ ಹರಿ ರಾವ್ ಕೈಕಂಬ, ವಿನೋದ್ ಮಾಡ ಕೈಕಂಬ, ಗುರುಕಂಬ್ಲ ಸೈಯದ್ ಅಸ್ಗರ್ ಆಲಿ ,ಸಂಪತ್ ಕುಮಾರ್ ಶೆಟ್ಟಿ. ಜೆರೋಮ್ ಫೆರ್ನಾಂಡಿಸ್ ಮುಂತಾದ ಗಣ್ಯರು ಶುಭ ಹಾರೈಸಿದರು. ರವಿರಾಜ್ ಶೆಟ್ಟಿ, ರೂಪ ರವಿರಾಜ್ ಶೆಟ್ಟಿ , ತ್ವಿಶಾ ಶೆಟ್ಟಿ ಸ್ವಾಗತಿಸಿದರು.






