ಕೈಕಂಬ: ರಾಮಕೃಷ್ಣ ತಪೋವನದಲ್ಲಿ ಉಚಿತ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರ ಪೊಳಲಿ ರಾಮಕೃ ಷ್ಣ ತಪೋವನದಲ್ಲಿ ನ.೩ರಂದು ಭಾನುವಾರ ನಡೆಯಿತು. ಶಿಬಿರವನ್ನು ರಾಮಕೃಷ್ಣ ಆಶ್ರಮದ ಸ್ವಾಮಿ ವಿವೇಕ ಚೈತನ್ಯಾನಂದ ದೀಪ ಬೆಳಗಿಸಿ ಉದ್ಘಾಟಿಸಿದರು.
ರೋಟರಿ ಕ್ಲಬ್ ಮಂಗಳೂರು ಉತ್ತರ ,ವಿವೇಕಾನಂದ ರೋಟರಿ ಕಮ್ಯೂನಿಟಿ ಕಾರ್ಪ್ಸ್ ಪೊಳಲಿ, ರೋರ್ಯಾಕ್ಟ್ ಕ್ಲಬ್ ಮಂಗಳೂರು ಉತ್ತರ ಮತ್ತು ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶಿಬಿರದಲ್ಲಿ ೧೬೦ಕ್ಕೂ ಹೆಚ್ಚು ಮಂದಿ ಶಿಬಿರಾರ್ಥಿಗಳು ಸದುಪಯೋಗ ಪಡೆದರು. ಕೆ.ಎಂಸಿ ಆಸ್ಪತ್ರೆಯ ವೈದ್ಯರು ತಪಾಸಣೆ ನಡೆಸಿ ಉಚಿತ ಚಿಕಿತ್ಸೆ ನೀಡಿದರು.

ವೇದಿಕೆಯಲ್ಲಿ ಕೆ.ಎಂ.ಸಿ ವೈದ್ಯರಾದ ಡಾ. ಕನಿಷ್ಕ್ ,ರೋಟರಿ ಕ್ಲಬ್ ಆಧ್ಯಕ್ಷ ನಯನ ಕುಮಾರ್ ಸುವರ್ಣ, ನಿಕಟ ಪೂರ್ವ ಅಧ್ಯಕ್ಷ ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ, ಶಿಬಿರ ನಿರ್ದೇಶಕರಾದ ದೇವ್ ದಾಸ್ ರಾವ್, ರೋಟರ್ಯಾಕ್ಟ್ ಅಧ್ಯಕ್ಷೆ ಸುಹಾನ ಸುವರ್ಣ, ವಿವೇಕಾನಂದ ರೋಟರಿ ಕಮ್ಯೂನಿಟಿ ಕಾರ್ಪ್ಸ್ ಅಧ್ಯಕ್ಷೆ ಸುಮತಿ ಹಾಗೂ ಮಮತ ಸುವರ್ಣ, ಪೂರ್ಣಿಮ ಉಪಸ್ಥಿತರಿದ್ದರು. ನಯನಕುಮಾರ್ ಸುವರ್ಣ ಸ್ವಾಗತಿಸಿ ನಿರೂಪಿಸಿದರು. ಮಾಧವಿ ಎಸ್ ಶೆಟ್ಟಿ ವಂದಿಸಿದರು.







