ಸುದ್ದಿ9 ಕೈಕಂಬ: ಗುರುಪುರ ಬೆಳ್ಳಿಬೆಟ್ಟು ಗುತ್ತು ಭಾಗಮಂಡಲ ಮಹಾಬಲ ಶೆಟ್ಟಿ ಅವರ 6 ಜನ ಮಕ್ಕಳಲ್ಲಿ ಕೊನೆಯ ಪುತ್ರ ದೀನ್ ದಯಾಳ್ (36 ) ಸುಮಾರು 10 ವರ್ಷದಿಂದ ಮುಂಚೆ ಹೊರ ದೇಶದ ಜಪಾನ್ ಗೆ ಉದ್ಯೋಗ ಅರಸಿಕೊಂಡು ಹೋಗಿ ಜಪಾನಿನ ಮಹಿಳೆ ನಿಕ್ಕೀ ಅವರನ್ನು ವಿವಾಹವಾಗಿ ಒಂದು ಮಗುವಿನ ತಂದೆ ದೀನ್ ದಯಾಳ್ ಅವರು ರಜಾ ನಿಮಿತ್ತ ತನ್ನ ಹೆಂಡತಿ ಮಗುವಿನೊಂದಿಗೆ (ಪಿಕ್ ನಿಕ್ )ಜಪಾನ್ ದೇಶದಲ್ಲಿ ಪ್ರವಾಸದ ಸಂದರ್ಭ ಸಮುದ್ರ ತೀರದಲ್ಲಿ ಮೀನು ಹಿಡಿಯಲು ಹೋಗಿ ಜಾರಿ ಬಿದ್ದು ಮ್ರತ ಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದೀನು ದಯಾಳ್ ಅವರ ಪತ್ನಿ ಅಲ್ಲಿಯ ಆಸ್ಪತ್ರೆ ಯಲ್ಲಿ ಕೋಮಾ ಸ್ಥಿತಿಯಲ್ಲಿ ಇದ್ದು ಮ್ರತರ ಅಂತ್ಯ ಸಂಸ್ಕಾರವನ್ನು ಅಲ್ಲಿಯೆ ನೆರವೇರಿಸಲು ಮಹಬಲ ಶೆಟ್ಟಿ ಅವರು ಅಲ್ಲಿಯ ಸಹೋದ್ಯೋಗಿಗಳಿಗೆ ತಿಳಿಸಿದ್ದಾರೆ ಎಂದು ಸುದ್ದಿ9 ಗೆ ತಿಳಿಸಿದರು.



