ಕುಡುಪು :ಶ್ರೀ ಅನಂತ ಪದ್ಮನಾಭ ದೇವರ ಬ್ರಹ್ಮಕಲಶೋತ್ಸವ 25 ರಂದು ಭಾನುವಾರ ಸಂಪನ್ನಗೊಳ್ಳಲಿದೆ. ಸತತ 8 ದಿವಸಗಳಿಂದ ನಿರಂತರ ಅನ್ನದಾನ ನಡೆಯುತ್ತಿದ್ದು ದೇವಳದ ಅನ್ನಛತ್ರದಲ್ಲಿ ಸಾವಿರಾರು ಭಕ್ತರು ದೇವರ ಅನ್ನ ಪ್ರಸಾದವನ್ನು ಸ್ವೀಕರಿಸಿದ್ದಾರೆ. ಬ್ರಹ್ಮಕಲಶವು ಹೋಮ, ಹವನ, ಯಾಗಇತ್ಯಾದಿ ಪೂಜೆಗಳೊಂದಿಗೆ ಇಂದು ಮಹಾ ಅನ್ನಸಂತರ್ಪಣೆ ನಡೆಯುತ್ತಿದ್ದು ಅನ್ನಪೂರ್ಣೆಶ್ವರೀ ದೇವಿಗೆ ವಿಶೇಷ ಪೂಜೆ ನೆರವೇರಿಸಿ ಮಹಾ ಅನ್ನಸಂತರ್ಪಣೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.





