ಮೂಡಬಿದಿರೆ: ಬೈಕ್ ಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿನ ಪುತ್ತಿಗೆ ಗ್ರಾಮದ ಮಿಜಾರು ಎಂಬಲ್ಲಿನ ರಾ.ಹೆ.169ರಲ್ಲಿ ಮಂಗಳವಾರ ನಡೆದಿದೆ.
ಹಂಡೇಲು ನಿವಾಸಿ ಉಮರ್ ಎಂಬವರ ಪುತ್ರ ಯಾಸಿರ್ ಮೃತ ಯುವಕ ಎಂದು ಗುರುತಿಸಲಾಗಿದೆ.
ಬೈಕ್ ನಲ್ಲಿ ತೆರಳುತ್ತಿದ್ದಾಗ ಈ ಅಪಘಾದ ಸಂಭವಿಸಿದ್ದು, ಯಾಸಿರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.


