#sravanabelagula

ಶ್ರವಣಬೆಳಗೊಳ: ೧೨ ವರ್ಷಕ್ಕೊಮ್ಮೆ ನಡೆಯುವ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ಪವಿತ್ರ ಕ್ಷೇತ್ರ ಶ್ರವಣಬೆಳಗೊಳ ಸಿದ್ಧಗೊಂಡಿದೆ.

ಫೆಬ್ರವರಿ ೭ ರಿಂದ ೨೬ ರವರೆಗೆ ೨೦ ದಿನಗಳ ಕಾಲ ನಡೆಯುವ ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿ ನೆಲೆಸಿರುವ ತ್ಯಾಗಮೂರ್ತಿ ಬಾಹುಬಲಿಯ ಮಹಾಮಸ್ತಕಾಭಿಷೇಕದ ಪೂರ್ವ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು.

ಬಾಹುಬಲಿ ಮೂರ್ತಿಯ ಮಹಾಮಸ್ತಕಾಭಿಷೇಕ ಫೆಬ್ರವರಿ ೭ ರಿಂದ ೨೬ ರವರೆಗೂ ನಡೆಯಲಿದ್ದು, ಅಭಿಷೇಕ ಕೈಂಕರ್ಯಗಳು ಫೆ. ೧೭ ರಿಂದ ೨೫ ರವರೆಗೆ ಅಂದರೆ ೯ ದಿನಗಳ ಕಾಲ ನಡೆಯಲಿದ್ದು, ಫೆ. ೭ ರಂದು ಮಹಾಮಸ್ತಕಾಭಿಷೇಕ ಉದ್ಘಾಟನೆಯಾಗಲಿದೆ, ಫೆ. ೧೬ ರವರೆಗೆ ಬೆಟ್ಟದ ಕೆಳಗೆ ಹತ್ತು ದಿನ ಪಂಚಕಲ್ಯಾಣ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಇತರೆ ಧಾರ್ಮಿಕ ಕಾರ್ಯಗಳು ಜರಗಲಿವೆ.

ಫೆ. ೧೭ ರಿಂದ ೨೫ ರವರೆಗೂ ಬೆಟ್ಟದ ಮೇಲೆ ಅಭಿಷೇಕ ಕೈಂಕರ್ಯ, ೨೬ ರಂದು ಅಭಿಷೇಕದ ಸಮಾರೋಪ ನಡೆಯಲಿದೆ.

ಮಹಾಮಸ್ತಕಾಭಿಷೇಕ ಫೆ. ೨೬ ರಂದು ಪೂರ್ಣಗೊಂಡರೂ ಸಾಮಾನ್ಯ ಜನರು ಅಭಿಷೇಕದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಕೊಡುವ ಸಲುವಾಗಿ ಆಗಸ್ಟ್‌ ವರೆಗೂ ಪ್ರತಿ ಭಾನುವಾರ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಭಕ್ತರು ಆಗಸ್ಟ್‌ ವರೆಗೂ ಪ್ರತಿ ಭಾನುವಾರದಂದು ಕಣ್ತುಂಬಿಕೊಳ್ಳಬಹುದಾಗಿದೆ. ಮಹಾಮಸ್ತಕಾಭಿಷೇಕಕ್ಕೆ ಬರುವ ಯಾತ್ರಾರ್ಥಿಗಳಿಗ
ತ್ಯಾಗಿ ನಗರ, ಕಳಸ ನಗರ, ಕಳಸ ನಗರ-೧, ಕಳಸ ನಗರ- ೨, ಪಂಚ ಕಲ್ಯಾಣ ನಗರ, ಸ್ವಯಂ ಸೇವಕರ ನಗರ, ಯಾತ್ರಿ ನಗರ, ಪೊಲೀಸ್ ನಗರ, ಮೀಡಿಯಾ ನಗರ ಹೀಗೆ ಎಲ್ಲ ಕ್ಷೇತ್ರಗಳಿ ಒತ್ತು ನೀಡಲಾಗಿದೆ.

ಉಪನಗರ ಹಾಗೂ ಶ್ರವಣಬೆಳಗೊಳದಲ್ಲಿ ಸ್ವಚ್ಛತೆ, ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕಸ ಹಾಗೂ ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ಸಹ ಸ್ಥಾಪಿಸಲಾಗಿದೆ ಎಂದಲಾಗುದೆ
ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕಕ್ಕೆ ಹೆಚ್ಚುವರಿ ರೈಲು, ಬಸ್‌ಗಳ ಸೇವೆಯನ್ನು ಒದಗಿಸಲಾಗಿದೆ ೪೦೦ ಮಂದಿ ವೈದ್ಯರು, ಕಾರ್ಯನಿರ್ವಹಿಸಲಿದ್ದಾರೆ.

ರಾಜ್ಯ ಸರ್ಕಾರದ ವತಿಯಿಂದ ಎಲ್ಲರಿಗೂ ಪತ್ರದ ಮೂಲಕ ಆಹ್ವಾನ ಮಾಡಲಾಗಿದೆ. ಶ್ರವಣಬೆಳಗೊಳದಲ್ಲಿ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅವರ ಆಶಯದಂತೆ ಸಂಸ್ಕೃತ ಹಾಗೂ ಪ್ರಾಕೃತ ಭಾಷೆಯ ವಿಶ್ವವಿದ್ಯಾಲಯ ಆರಂಭವಾಗುತ್ತಿದ್ದು, ಇದಕ್ಕೂ ಸರ್ಕಾರ ಅಗತ್ಯ ನೆರವು ನೀಡಿದೆ. ೨೫ ಎಕರೆ ಪ್ರದೇಶದಲ್ಲಿ ವಿಶ್ವವಿದ್ಯಾಲಯ ನಿರ್ಮಾಣಗೊಳ್ಳಲಿದ್ದು, ದೇಶದಲ್ಲೇ ಮೊಟ್ಟ ಮೊದಲ ಪ್ರಾಕೃತ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಗಳಿಸಲಿದೆ.

ಶ್ರವಣಬೆಳಗೊಳದ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅವರು ಮಾತನಾಡಿ ಶ್ರವಣಬೆಳಗೊಳದ ಬಾಹುಬಲಿಯ ಮಹಾಮಸ್ತಕಾಭಿಷೇಕ ಭಾರತೀಯ ಸಂಸ್ಕೃತಿ, ಪರಂಪರೆಯ ರಕ್ಷಣೆಯ ಜತೆಗೆ ಜಗತ್ತಿಗೆ ನಿಶ್ಶಸ್ತ್ರೀಕರಣ, ಯುದ್ಧ ರಹಿತ ಬದುಕು, ಶಾಂತಿ, ಅಹಿಂಸೆಯ ಸಂದೇಶವನ್ನು ಸಾರುವ ಮಹಾ ಕಾರ್ಯ ಇದಾಗಿದೆ ಎಂದರು.

ಭಗವಾನ್ ಬಾಹುಬಲಿ ದೊಡ್ಡ ತಪಸ್ವಿ, ೨೪ ತೀರ್ಥಂಕರರು ಸೇರಿದಂತೆ ಜಗತ್ತಿನಲ್ಲೇ ಬಾಹುಬಲಿಯನ್ನು ಮೀರಿಸುವ ತಪಸ್ವಿಗಳು ಇಲ್ಲ. ಆತನೊಬ್ಬ ಮಹಾನ್ ತ್ಯಾಗಿ, ಶಾಂತಿಯ ದೂತ. ಇಂತಹ ಮಹಾನ್ ತಪಸ್ವಿಯ ತ್ಯಾಗ ಸಂದೇಶಗಳನ್ನು ಜಗತ್ತಿಗೆ ಹೇಳುವುದು ಭಾರತಕ್ಕೆ ಹೆಮ್ಮೆಯ ವಿಚಾರವಾಗಿದೆ ಎಂದರು.

ವಿಶ್ವ ಸಂಸ್ಥೆಯಲ್ಲಿ ನಿಶ್ಶಸ್ತ್ರೀಕರಣದ ಚರ್ಚೆಗಳು ನಡೆಯುತ್ತಿವೆ. ಬಹು ಹಿಂದೆಯೇ ಬಾಹುಬಲಿ ನಿಶಸ್ತ್ರ ಯುದ್ಧ, ರಕ್ತಪಾತ ಬೇಡ ಎಂಬ ಸಂದೇಶವನ್ನು ನೀಡಿದ್ದವರು. ಇಂತಹ ಮಹಾನ್ ತಪಸ್ವಿಗೆ ೧೨ ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ಮೂಲಕ ಗೌರವ ಸಲ್ಲಿಸುವ ಕೆಲಸವನ್ನು ಮಾಡಲಾಗುತ್ತಿದೆ.

ಇದಕ್ಕೆಲ್ಲ ಕಳಸವಿಟ್ಟಂತೆ ದೇಶದ ಹಲವು ಭಾಗಗಳಿಂದ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳಲು ೧೭೫ ಜೈನ ಮುನಿಗಳು ಕಾಲ್ನಡಿಗೆಯಲ್ಲೇ ಈಗಾಗಲೇ ಶ್ರವಣಬೆಳಗೊಳಕ್ಕೆ ಆಗಮಿಸಿದ್ದಾರೆ. ಇನ್ನು ೧೦೦ಕ್ಕೂ ಹೆಚ್ಚು ಜೈನ ಮುನಿಗಳು ಆಗಮಿಸುವ ನಿರೀಕ್ಷೆ ಇದೆ. ಇದರ ಜತೆಗೆ ಆಚಾರ್ಯ ಪರಂಪರೆಯ ೧೬ ಜೈನ ಆಚಾರ್ಯರು ಈ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳುವರು.

ಮಹಾಮಸ್ತಕಾಭಿಷೇಕಕ್ಕೆ ಸಿದ್ಧತೆಗಳು ಭರದಿಂದ ನಡೆದಿವೆ. ಪರಂಪರೆಯ ಸಂಸ್ಕೃತಿಯಂತೆ ಮಹಾಮಸ್ತಕಾಭಿಷೇಕ ನಡೆಯಲಿದೆ. ಅಂದಿನಿಂದ ಇಂದಿನವರೆಗೂ ರಾಜ ಮಹಾರಾಜರು, ಬ್ರಿಟಿಷರು, ಸ್ವಾತಂತ್ರ್ಯಾ ನಂತರ ಪ್ರಜಾಪ್ರಭುತ್ವದ ಆಳ್ವಿಕೆಯಲ್ಲಿ ಈ ಮಹಾಮಸ್ತಕಾಭಿಷೇಕ ಯಾವುದೇ ಅಡತಡೆ ಇಲ್ಲದೆ ನಡೆದುಕೊಂಡು ಬಂದಿದೆ.

ಮಹಾಮಸ್ತಕಾಭಿಷೇಕಕ್ಕೆ ರಾಜ್ಯ ಸರ್ಕಾರ ಸಕಲ ಸವಲತ್ತುಗಳನ್ನು ಒದಗಿಸಿದೆ. ಸಂಪ್ರದಾಯ ಬದ್ಧವಾಗಿ ಮಹಾಮಸ್ತಕಾಭಿಷೇಕ ನಡೆಯಲಿದೆ. ಮಹಾಮಸ್ತಕಾಭಿಷೇಕವನ್ನು ವ್ಯವಸ್ಥಿತವಾಗಿ ಸಂಪ್ರದಾಯ ಬದ್ಧವಾಗಿ ನಡೆಸಲು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಉಪಸಮಿತಿಗಳನ್ನು ರಚನೆ ಮಾಡಲಾಗಿದ್ದು, ಬರುವ ಎಲ್ಲ ಯಾತ್ರಾರ್ಥಿಗಳಿಗೂ ಸವಲತ್ತುಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಮಹಾಮಸ್ತಕಾಭಿಷೇಕದ ಕಳಸ ಹರಾಜಿನಿಂದ ಬರುವ ಹಣವನ್ನು ಜೈನ ಮಠ ಶಿಕ್ಷಣ ಹಾಗೂ ಸಾಮಾಜಿಕ ಕಾರ್ಯಗಳಿಗೆ ಬಳಸುತ್ತಿದೆ. ಕಳೆದ ವರ್ಷ ಮೊದಲ ೧ ಕೋಟಿ ೧ ಲಕ್ಷಕ್ಕೆ ಹರಾಜಾಗಿತ್ತು. ಆ ಹಣವನ್ನು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಬಳಸಲಾಗಿದೆ. ಈ ಬಾರಿಯೂ ಕಳಸದಿಂದ ಬರುವ ಹಣವನ್ನು ಶಿಕ್ಷಣ, ಆಸ್ಪತ್ರೆ ನಿರ್ಮಾಣ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಿಗೆ ಬಳಸಲಾಗುವುದು ಎಂದರು.

ಮಹಾಮಸ್ತಕಾಭಿಷೇಕದ ಮೊದಲ ದಿನ ೧೦೮ ಕಳಸಗಳು ಇದ್ದು, ನಂತರದ ೮ ದಿನ ೧೦೦೮ ಕಳಸಗಳಿಂದ ಅಭಿಷೇಕ ಕಾರ್ಯಗಳು ನಡೆಯುತ್ತವೆ ಎಂದು ಅವರು ಹೇಳಿದರು.

ಈ ಬಾರಿಯ ಬಾಹುಬಲಿ ಮೂರ್ತಿಯ ಮಹಾಮಸ್ತಕಾಭಿಷೇಕಕ್ಕೆ ಅಟ್ಟಣಿಗೆ ನಿರ್ಮಾಣದಲ್ಲಿ ಜರ್ಮನ್ ತಂತ್ರಜ್ಞಾನವನ್ನು ಬಳಸಲಾಗಿದ್ದು ಲೋಹದಿಂದ ನಿರ್ಮಾಣವಾಗಿರುವ ಅಟ್ಟಣಿಗೆಗೆ ಯಾವುದೇ ವೆಲ್ಡಿಂಗ್ ಮಾಡದೇ ಎಲ್ಲವನ್ನು ಜೋಡಿಸಿಯೇ ಅಟ್ಟಣಿಗೆ ನಿರ್ಮಾಣ ಮಾಡಿ ಅವುಗಳನ್ನು ಮರುಬಳಕೆ ಮಾಡಬಹುದಾಗಿದೆ.

ಒಟ್ಟು ಪ್ರತ್ಯೇಕ ೨ ಅಟ್ಟಣಿಗೆಗಳನ್ನು ಸಿದ್ದಪಡಿಸಲಾಗಿದ್ದು, ಬಾಹುಬಲಿಮೂರ್ತಿಯ ಅಭಿಷೇಕಕ್ಕೆ ಪ್ರತ್ಯೇಕ ಅಟ್ಟಣಿಗೆ ಹಾಗೂ ಬಾಹುಬಲಿ ಮೂರ್ತಿಯ ಎದುರಿಗೆ ಅಕ್ಕಪಕ್ಕದಲ್ಲಿ ಸುಮಾರು ೫೬೦೦ ಮಂದಿ ಕುಳಿತು ಮಹಾಮಸ್ತಕಾಭಿಷೇಕವನ್ನು ವೀಕ್ಷಿಸಲು ಅನುವಾಗುವಂತೆ ವಿಶಾಲವಾದ
ಅಟ್ಟಣಿಗೆಯ ಮೇಲೆ ಗಣ್ಯರು, ಅತಿ ಗಣ್ಯರು, ಮಾಧ್ಯಮದವರು ಹೀಗೆ ಆಹ್ವಾನಿತರು ಹಾಗೂ ಮಹಾ ಕಳಸವನ್ನು ಖರೀದಿಸುವ ಕುಟುಂಬಸ್ಥರು ಕುಳಿತು ಮಹಾಮಸ್ತಕಾಭಿಷೇಕವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಬಾಹುಬಲಿ ಮೂರ್ತಿಗೆ ಯಾವುದೇ ರೀತಿ ಭಂಗ ಉಂಟಾಗದ ರೀತಿಯಲ್ಲಿ ೩ ತಿಂಗಳಲ್ಲಿ ಶೇ ೯೫% ಕಾರ್ಯವನ್ನು ಲೇಯರ್ ಕಂಪನಿಯವರು ಪೂರ್ಣಗೊಳಿಸಿದ್ದಾರೆ.

ಸರ್ಕಾರದಿಂದ ಅಟ್ಟನಿಗೆ ನಿರ್ಮಿಸಲು ೧೨ ಕೋಟಿ ರೂಗಳು ಮಂಜೂರು ಮಾಡಿದು ಅಟ್ಟಣಿಗೆ ನಿರ್ಮಾಣಕ್ಕೆ ೧೧.೨೫ ಕೋಟಿ ರೂ ಖರ್ಚು ಮಾಡಿದು
ಅಟ್ಟಣಿಗೆಗೆ ತಲುಪಲು ಮೂರು ಲಿಫ್ಟ್ ಅಳವಡಿಸಿದ್ದು, ಅಭಿಷೇಕದ ವೇಳೆ ನೂಕು ನುಗ್ಗಲಾಗದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೇ ಅಟ್ಟಣಿಗೆಯ ಸುತ್ತಲೂ ಸುರಕ್ಷತೆಯ ದೃಷ್ಟಿಯಿಂದ ಬಲೆ ಹಾಕಲಾಗಿದೆ.

ಮಹಾಮಸ್ತಕಾಭಿಷೇಕ ಸಮಯದಲ್ಲಿ ಸುಮಾರು ೩೫ ರಿಂದ ೪೦ ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಅವರಿಗೆ ಅಗತ್ಯವಾದ ಊಟ, ವಸತಿ, ಬಸ್ ಸೌಲಭ್ಯ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಜಿಲ್ಲಾಡಳಿತ ಮುಂದಾಗಿದೆ.

ಬಹುಬಲಿ ಮೂರ್ತಿಗೆ ನಡೆಯುವ ವಿಶೇಷ ಅಭಿಷೇಕ ಹಾಗೂ ಪೂಜಾ ಕಾರ್ಯಗಳನ್ನು ನೇರವಾಗಿ ವೀಕ್ಷಿಸುವ ಸಲುವಾಗಿ ದೂರದರ್ಶನ, ಸಾಮಾಜಿಕ ಜಾಲತಾಣಗಳು ಸೇರಿದಂತೆ ಆಯ್ದ ಪ್ರಮುಖ ಸ್ಥಳಗಳಲ್ಲಿ ಎಲ್‌ಇಡಿ ಪರದೆಗಳ ವ್ಯವಸ್ಥೆಗಳನ್ನು ಕಲ್ಪಿಸಿ ನೇರಪ್ರಸಾರ ಮಾಡಲು ಕ್ರಮಕೈಗೂಳ್ಳಲಾಗಿದೆ.
ವಾಹನ ದಟ್ಟಣೆ ನಿಯಂತ್ರಿಸುವ ಸಲುವಾಗಿ ೬೫ ಕೆಎಸ್‌ಆರ್‌ಟಿಸಿ ಮಿನಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಖಾಸಗಿ ವಾಹನಗಳ ಸಂಚಾರವನ್ನು ಆದಷ್ಟು ನಿಯಂತ್ರಣಕ್ಕೆ ನಗರದ ಹೊರಗಡೆ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಈ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಸುಮಾರು ೫ ಸಾವಿರ ಮಂದಿ ಪೋಲಿಸರನ್ನು ಕತ೯ವ್ಯ ಮಾಡಲಿದ್ದಾರೆ. ನಗರದಾದ್ಯಂತ ಸುಮಾರು ೭೫೦ ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಅದರ ವೀಕ್ಷಣೆಗಾಗಿ ೧೦೦ ಅಡಿ ಅಗಲದ ಎಲ್‌ಇಡಿ ಪರದೆಯ ವ್ಯವಸ್ಥೆ ಮಾಡಲಾಗಿದೆ.

ಬಂದ ಅತಿಥಿಗಳು, ಗಣ್ಯರು, ಮುನಿಗಳು ತಂಗಲು ೧೨ ಉಪನಗರಗಳನ್ನು ನಿರ್ಮಿಸಲಾಗಿದ್ದು, ಪ್ರತಿ ಕೊಠಡಿಗೆ ೧೮೦೦ ರೂ ಶುಲ್ಕವನ್ನು ನಿಗದಿಪಡಿಸಲಾಗಿದೆ. ಉಪನಗರಗಳನ್ನು ನಿರ್ಮಿಸಲು ಸುಮಾರು ೫೨೫ ಎಕರೆ ಭೂಮಿಯನ್ನು ರೈತರಿಂದ ಪಡೆದಕೊಳ್ಳಲಾಗಿದೆ. ಭೂಮಿ ನೀಡಿದ ಪ್ರತಿ ರೈತರಿಗೆ ಒಂದು ಗುರುತಿನ ಚೀಟಿ ನೀಡಿದ್ದು ಅವರಿಗೆ ಪರಿಹಾರವಾಗಿ ೩ ಬೆಳೆಯ ಪರಿಹಾರ ಧನವನ್ನು ನೀಡಲಾಗುವುದು. ಅಂದಾಜು ೪.೫ ಕೋಟಿ ರೂಪಾಯಿ ರೈತರಿಗೆ ಪರಿಹಾರ ಧನ ನೀಡಲಾಗುವುದು.

ಪ್ರವಾಸೋದ್ಯಮಕ್ಕೂ ಹೆಚ್ಚು ಒತ್ತು ನೀಡಲಾಗಿದ್ದು, ಪ್ರವಾಸಿಗರಿಗೆ ಅನುಕೂಲವಾಗಲು ಹೆಲಿ ಟೂರಿಸಂ, ಬೈಕ್ ಟೂರಿಸಂಗಳನ್ನು ಜಾರಿಗೆ ತರಲಾಗಿದೆ.

By Suddi9

Leave a Reply

Your email address will not be published. Required fields are marked *