ಬಡಗಬೆಳ್ಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರಿಯಂಗಳ ಮಂಡಲ ಇದರ ವತಿಯಿಂದ ಡಿ.3 ರಂದು ಭಾನುವಾರ ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದಿಂದ ಬಡಗಬೆಳ್ಳೂರು ಶ್ರೀ ಆದಿಶಕ್ತಿಚಾಮುಂಡೇಶ್ವರೀ ದೇವಸ್ಥಾನದವರೆಗೆ ಪಥಸಂಚಲನ ಜರುಗಿತು.
ಪುತ್ತೂರು ಜಿಲ್ಲಾ ಸಂಘಚಾಲಕ ಮಾನ್ಯ ಕಾಂತಪ್ಪ ಶೆಟ್ಟಿ ಕೊಡ್ಮಾಣ್, ಮಂಗಳೂರು ವಿಭಾಗ ಸಹ ಕಾರ್ಯವಾಹ ಜಗದೀಶ್ ,ಬಂಟ್ವಾಳ ತಾಲೂಕ್ ಕಾರ್ಯಕಾರಿಣಿ ಸದಸ್ಯ ಪಿಕೆ ಪದ್ಮನಾಭ, ಬಂಟ್ವಾಳ ತಾಲೂಕು ಕಾರ್ಯವಾಹ ಸುಧೀಂದ್ರ ರಾಯಿ, ಬಂಟ್ವಾಳ ತಾಲೂಕು ವ್ಯವಸ್ಥಾಪನ ಪ್ರಮುಖ್ ಮಾಧವ ನಾಣ್ಯ,ಕರಿಯಂಗಳ ಮಂಡಲ ಕಾರ್ಯವಾಹ ಜಯಂತ ಮಣಿಕಂಟಪುರ ಮತ್ತು ರಾಷ್ಟ್ರೀಯ ಸ್ವಯಂ ಸೇವಕಸಂಘದ ಸ್ವಯಂಸೇವಕರು ಪಥಸಂಚಲನದಲ್ಲಿ ಭಾಗವಹಿಸಿದ್ದರು.
* ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.






