ವಿಟ್ಲ: ಹವ್ಯಾಸಿ ಯಕ್ಷ ಬಳಗ ವಿಟ್ಲ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ  ಸೋಮವಾರ ಬೆಳಿಗ್ಗೆ 9-30 ರಿಂದ ಸಂಜೆ 7 ರ ತನಕ ಅಮೋಘ ಯಕ್ಷಗಾನ ತಾಳಮದ್ದಳೆ `ಮಹಿಷ ವಧೆ’, `ಕರ್ಣಾರ್ಜುನ’ ಮತ್ತು `ಸುಭದ್ರಾ ಕಲ್ಯಾಣ’ ವು ನಡೆಯಿತು. ಈ ಸಂದರ್ಭದಲ್ಲಿ ಅನುಭವಿ ಹವ್ಯಾಸಿ ಭಾಗವತರಾದ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್ ಇವರನ್ನು ಹವ್ಯಾಸಿ ಯಕ್ಷ ಬಳಗದ ವತಿಯಿಂದ ಸನ್ಮಾನಿಸಲಾಯಿತು.

SHV_1495ಈ ಕಾರ್ಯಕ್ರಮದಲ್ಲಿ ವಿಟ್ಲ ಅರಮನೆಯ ಜಯರಾಮ ವರ್ಮ, ಪುತ್ತೂರು ಬೊಳುವಾರು ಶ್ರೀ ಆಂಜನೇಯ ಯಕ್ಷ ಕಲಾಸಂಘದ ಅಧ್ಯಕ್ಷ ಭಾಸ್ಕರ್ ಬಾರ್ಯ, ಕಲಾವಿದರುಗಳಾದ ಪಕಳಕುಂಜ ಶ್ಯಾಂ ಭಟ್, ಮೋನಪ್ಪ ಸೇರಾಜೆ, ಸಂಜೀವ ಪೂಜಾರಿ, ಪೂರ್ಲಪ್ಪಾಡಿ ಈಶ್ವರ ಭಟ್ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *