ಬಂಟ್ವಾಳ : ಸಜಿಪಮುನ್ನೂರು ಗ್ರಾ.ಪಂ.ವ್ಯಾಪ್ತಿಯ ರೂ.9.5ಲಕ್ಷ ವೆಚ್ಚದಲ್ಲಿ ಶಾಂತಿನಗರದಿಂದ ಮರ್ತಾಜೆ ಗಡಿವರೆಗೆ ಕಾಂಕ್ರಿಟೀಕೃತ ರಸ್ತೆ ಉದ್ಘಾಟನೆಯನ್ನು ಅರಣ್ಯ ಪರಿಸರ ಜೀವಿಶಾಸ್ರ್ತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಅರಣ್ಯ ಅಭಿವೃದ್ಧಿ ನಿಗಮ ನಿರ್ದೇಶಕ ಪರಮೇಶ್ವರ ಮೂಲ್ಯ, ಆರಾದನಾ ಸಮಿತಿ ಸದಸ್ಯ ಯೂಸುಫ್ ಕರಂದಾಡಿ, ತಾ.ಪಂ.ಸದಸ್ಯೆ ನಸೀಮಾ ಬೇಗಂ, ಗ್ರಾ.ಪಂ.ಅಧ್ಯಕ್ಷ ಶರೀಫ್ ನಂದಾವರ, ಪ್ರಮುಖರಾದ ಮಾಜಿ ಸದಸ್ಯ ವಿಶ್ವನಾಥ, ದೀನು ಅರಸು, ಲತೀ ಫ್, ರಾಧಾಕೃಷ್ಣ, ರಂಜಿತ್, ಅಝೀಜ್, ಸತೀಶ್ ಶಾಂತಿನಗರ, ವಿಶ್ವನಾಥ ಶಾಂತಿನಗರ, ಗುತ್ತಿಗೆದಾರ ಮನ್ಸೂರ್, ಸುಂದರ ಶಾಂತಿನಗರ ಮತ್ತಿತರರು ಉಪಸ್ಥಿತರಿದ್ದರು.
