ಬಂಟ್ವಾಳ: ಮಂಗಳೂರು ಮಹಾ ನಗರ ಪಾಲಿಕೆಯ ವಲಯ ಆಯುಕ್ತೆ ರೇಖಾ ಜೆ. ಶೆಟ್ಟಿ ಅವರು ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಯಾಗಿ ರೇಖಾ ಜೆ. ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.
ಬಂಟ್ವಾಳ ನಗರ ಪಂಚಾಯತ್ ಆಗಿ ಇದ್ದ ವೇಳೆ ಸ್ವರ್ಣ ಯೋಜನಾಧಿಕಾರಿಯಾಗಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರೇಖಾ ಜೆ. ಶೆಟ್ಟಿ ಬಳಿಕ ಪುತ್ತೂರು ನಗರ ಸಭೆಯ ಪೌರ ಆಯುಕ್ತ ರಾಗಿದ್ದರು. 

ಈ ಹಿಂದೆ ಮುಖ್ಯಾಧಿಕಾರಿ ಯಾಗಿದ್ದ ಎಂ.ಎಚ್. ಸುಧಾಕರ ಅವರು ಪುತ್ತೂರು ನಗರ ಸಭಾ ಕಾರ್ಯಾಲಯದ ವ್ಯವಸ್ಥಾಪಕರಾಗಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ತೆರವಾದ ಹುದ್ದೆಗೆ ರೇಖಾಜೆ.ಶೆಟ್ಟಿಅವರನ್ನುನಿಯುಕ್ತಿಗೊ ಳಿಸಲಾಗಿದೆ.ಸೋಮವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ದೇವದಾಸ ಶೆಟ್ಟಿ ಅವರು ಮುಖ್ಯಾಧಿಕಾರಿಯಾಗಿದ್ದ ಸುಧಾಕರ್ ಅವರ ಕಾರ್ಯವೈಖರಿಯ ಬಗ್ಗೆ ದಾಸರಕೀರ್ತನೆಯ ಮೂಲಕ ಚುಚ್ಚಿದ್ದರು.
