ಕೈಕಂಬ:ಪುತ್ತೂರು ತಾಲೂಕಿನ ಶ್ರೀ ಕ್ಷೇತ್ರ ಗೆಜ್ಜೆ ಗಿರಿ ನಂದನ ಬಿತ್ತಲ್ ದೇಯಿ ಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನ ಆದಿ ದೈವ ಧೂಮಾವತಿ ಕ್ಷೇತ್ರ ಗುರು ಸಾಯನ ಬೈದ್ಯೆರ ಶಕ್ತಿ ಪೀಠ ಬಡಗನ್ನೂರು ಪಡುಮಲೆಯಲ್ಲಿ ಪುನರುತ್ಥಾನದ ಪುಣ್ಯ ಕಾರ್ಯದಲ್ಲಿ ಕೈ ಜೋಡಿಸಲು ಏ.16 ರಂದು ಭಾನುವಾರ ಸುಂಕದಕಟ್ಟೆ ಅನ್ನಪೂರ್ಣೇಶ್ವರೀ ದೇವಸ್ಥಾನದಲ್ಲಿ ಮೂಲಸ್ಥಾನ ಅಭಿವೃದ್ಧಿ ಕುರಿತು ಬಿಲ್ಲವ ಸಮಾಜ ಬಾಂಧವರ ಸಮಾಲೋಚನಾ ಸಭೆಯು ನಡೆಯಲಿದೆ. ಆ ಪ್ರಯುಕ್ತ ಗುರುಪುರ ಹಾಗೂ ಸುರತ್ಕಲ್ ವಲಯದ “ಪೂರ್ವ ಭಾವಿ ಸಭೆ”ಯನ್ನು ವಾಮಂಜೂರಿನ ಅಮೃತ್ ಮಹಲ್ ನಲ್ಲಿ ಮಾ. 31 ರಂದು ಶುಕ್ರವಾರ ಸಂಜೆ 6ಕ್ಕೆ ಸರಿಯಾಗಿನಡೆಯಲಿದೆ ಈ ಸಭೆಯಲ್ಲಿ ಬಿಲ್ಲವ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
