ಕೈಕಂಬ: ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನ ಕಾಬೋಡಿಗುತ್ತು ಕೂರಿಯಾಳ ವರ್ಷಾವಧಿ ನೇಮೋತ್ಸವಮಾ.24ರಂದು ಶುಕ್ರವಾರ ಜರಗಲಿದೆ. ಶುಕ್ರವಾರ ಬೆಳಗ್ಗೆ ಕಾಂಬೋಡಿ ಭಂಡಾರದ ಮನೆಯಿಂದ ದೈವಸ್ಥಾ ನಕ್ಕೆ ಭಂಡಾರ ಬರುವುದು ರಾತ್ರಿ 10 ಗಂಟೆಗೆ ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೈವದ ನೇಮೋತ್ಸವ ಜರಗಲಿದೆ. ಕಾಬೋಡಿಗುತ್ತು ಯಜಮಾನ ದಿನಕರ ಆಳ್ವ ಮತ್ತು ಕುಟುಂಬಿಕರು, ಮುಂಡಡ್ಕಗುತ್ತು ಯಜಮಾನ ಎಂ ರತ್ನಾಕರ ಶೆಟ್ಟಿ , ಮಾಯಿಲ್ಕೋಡಿ ಗುತ್ತಿನವರು ಪಡು ಗುತ್ತಿನವರು , ಮೂವ ಮನೆಯವರು ಹಾಗೂ ಊರ ಹತ್ತು ಸಮಸ್ತರು ಭಕ್ತಾಧಿಗಳು ಪಾಲ್ಗೊಳ್ಳುವರು.
