ಉಡುಪಿ:-ಜೇಸಿಐ ವಲಯದ ವಿವಿಧ ಘಟಕಗಳಿಂದ ಕೊರಂಗ್ರಪಾಡಿ ಭಾಂಧವ್ಯ ವೃದ್ದಾಶ್ರಮ ದಲ್ಲಿ ಬೃಹತ್ ಸ್ವಚ್ಚತಾ ಅಭಿಯಾನ ಮತ್ತು ಸಹಭೋಜನ ಕಾರ್ಯಕ್ರಮ ಮಾ.15 ರಂದು ನಡೆಯಿತು.ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚತೆ ಮತ್ತು ರಕ್ರದಾನದ ಬಗ್ಗೆ ಅರಿವು ಮೂಡಿಸುವ ಬೈಕ್ ಜಾಥಾ ನಡೆಸಲಾಯಿತು.ಈ ಸಂದರ್ಭದಲ್ಲಿ ಆಶ್ರಮದ ಮುಖ್ಯಸ್ಥರಾದ ಕುಮಾರ್.ಎಸ್,ಭಾಂಧವ್ಯದ ದಿನೇಶ್ ಸಾಸ್ತಾನ,ಮನೋಜ್ ಕಡಬ,ಕರುಣಾಕರ ಬಂಗೇರ,ಶೆರ್ಲಿ ಮನೋಜ್,ರಾಘವೇಂದ್ರ ಪ್ರಭು ಕರ್ವಾಲು,ಅಕ್ಷತಾ ಗಿರೀಶ್ ಜ್ಯೋತಿ ರಮಾನಾಥ ಶೆಟ್ಟಿ ಭಾಂದವ್ಯದ ಸದಸ್ಯರು ಮತ್ತು ಡಾ||ಕೀರ್ತಿ ಪಾಲನ್ ಭಾಗವಹಿಸಿದ್ದರು.


