ಕೈಕಂಬ: ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇದರ ಇಆರ್‍ಡಬ್ಲ್ಯುಸಿ ಯೋಜನೆಯಡಿಯಲ್ಲಿ ಕೈಕಂಬ ವಲಯದ ಮಕ್ಕಳ ಹಕ್ಕುಗಳ ಸಂಘದ ಮಕ್ಕಳಿಗೆ ಸಾಂಸ್ಕೃತಿಕ ಸ್ಪರ್ಧೆಯನ್ನು ಕುಪ್ಪೆಪದವು ಆಶಾಕಿರಣ ಚರ್ಚ್ ಹಾಲ್‍ನಲ್ಲಿ ಆಯೋಜಿಸಲಾಯಿತು.

3-vp-makkala-samskrutika-sparde

ಯೋಜನಾ ಸಂಯೋಜಕ ವಿಲಿಯಂ ಸ್ಯಾಮುವೆಲ್ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವಿಧ ಸರಕಾರಿ ಶಾಲೆಗಳಿಂದ ಆಗಮಿಸಿದ ಮಕ್ಕಳು ವೈಯಕ್ತಿಕ ಹಾಡು, ಸಾಮೂಹಿಕ ಹಾಡು, ಭಾಷಣ, ರಂಗೋಲಿ, ಭಿತ್ತಿಪತ್ರ ತಯಾರಿ, ಕಿರು ಪ್ರಹಸನಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಯೋಜನೆಯ ಮೇಲ್ವಿಚಾರಕಿ ರೇಷ್ಮಾ ಜೋಗಿ ಹಾಗೂ ನೀರುಮಾರ್ಗ ವಲಯದ ಕಾರ್ಯಕರ್ತೆ ಶೀಲಾ ಬಿ.ಶೆಟ್ಟಿ ತೀರ್ಪುಗಾರರಾಗಿದ್ದರು. ಕೈಕಂಬ ವಲಯದ ಕಾರ್ಯಕರ್ತೆಯರಾದ ಪಾಲಾಕ್ಷೀ, ಹಾಗೂ ಸೀತಾಲಕ್ಷ್ಮೀ ಮತ್ತು ಎಲ್ಲಾ ಶಾಲಾ ಶಿಕ್ಷಕರು-ಮಕ್ಕಳು ಉಪಸ್ಥಿತರಿದ್ದರು. ವಲಯ ಸಂಯೋಜಕ ಈಶ್ವರ್ ಸ್ವಾಗತಿಸಿದರು.

By suddi9

Leave a Reply

Your email address will not be published. Required fields are marked *