ಸುದಿ9 ಕೈಕಂಬ: ಗಂಜಿಮಠ ಮತ್ತು ಸುತ್ತ ಮುತ್ನಲಿನ ಪ್ರದೇಶದ ಸರ್ವಾಂಗಿಣ ಅಭಿವೃದ್ಧಿಗೆ ತಾನು ಶ್ರಮಿಸುವುದಾಗಿ ಶಾಸಕ ಮೊದೀನ್ ಬಾವಾ ಹೇಳಿದರು. ಅವರು ಭಾನುವಾರ ಗಂಜಿಮಠ ಶ್ರೀ ವಿಜಯ ವಾಹಿನಿ ಗಂಜಿಮಠ ಇದರ ಆಶ್ರಯದಲ್ಲಿ ನಡೆದ 10ನೇ ವರ್ಷದ ಉಚಿತ ಪುಸ್ತಕ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿದ ಮೇಲೆ ಮಾತಾಡಿದರು. ವಿಜಯವಾಹಿನಿಯು ಹತ್ತು ವರ್ಷಗಳಿದ ಿಲ್ಲಿಯ ಾಆರ್ಥಿಕವಾಗಿ ಹಿಂದುಳಿದ ವರಿಗೆ ಹಾಗೂ ಇಲ್ಲಿಯ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕವನ್ನು ನೀಡುತ್ತಿದ್ದಾರೆ . ಓದುವ ಪುಸ್ತಕವನ್ನು ಮಕ್ಕಳಿಗೆ ಅನ್ನಭಾಗ್ಯ , ಹಾಲು ಸರಕಾರದ ವತಿಯಿಂದ ನೀಡುತ್ತೇವೆ ಎಂದು ಈಸಂದರ್ಭದಲ್ಲಿ ಶಾಸಕ ಮೋದಿನ್ ಬಾವಾ ಹೇಳಿದರು. ಇಲ್ಲಿ ಮೂಲಭೂತ ಸೌಕರ್ಯಗಳು ಕಡಿಮೆ ಇರುವುದು ನಮ್ಮ ಗಮನ್ಕೆ ಬಂದಿದೆ. ಈ ಬಗ್ಗೆ ನೀವು ನನ್ನ ಗಮನಕ್ಕೆ ತಂದರೆ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ತೆಗೆಸಿಕೊಡುವ ಪ್ರಾಮಾಣಿಕ ಯತ್ನ ನಡೆಸುತ್ತೇನೆ. ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ತುತ್ತಾದವರಿಗೆ ಅವರಿಗೆ ಸರಕಾರದ ವತಿಯಿಂದ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದರು ಈ ಸಂದರ್ಭದಲ್ಲಿ ನಿವೃತ ಶಿಕ್ಷಕರಾದ ಮಾದ ಮಯ್ಯ, ಅಣ್ಣಯ್ಯ ಎಂ, ಹಾಗೂ ಸುಬ್ರಾಯ ಭಟ್ ಇವರನ್ನು ಸನ್ಮಾನಿಸಲಾಯ್ತು. ಬಳಿಕ ಗಂಜಿಮಠ ಪಂಚಯತ್ ವ್ಯಾಪ್ತಿಯ ಮೊಗರು, ತೆಂಕವುಳಿಪಾಡಿ, ಬಡಗವುಳಿಪಾಡಿ ಗ್ರಾಮದ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ವಿಧ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯ್ತು.
ಇದರ ಅಧ್ಯಕ್ಷತೆಯನ್ನು ಮಾಜಿ ಜಿಲ್ಲಾ ಪಂ .ಸದಸ್ಯ ಕೃಷ್ಣ ಅಮೀನ್ ವಹಿಸಿದ್ದರು. ಸಭಾಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ ಉದ್ಯಮಿ ಉಳಿಪಾಡಿಗುತ್ತು ರಾಜೇಶ್ ನಾ ಕ್ ನೆರವೇರಿಸಿದರು. ಉದ್ಯಮಿ ಕರುಣಾಕರ ಶೆಟ್ಟಿ, ಉಧ್ಯಮಿ ಮುಂಬೈ ಮೋನಪ್ಪ ಕಕರ್ೇರಾ ಪದ್ರೆಂಗಿ, ಪುಸ್ತಕ ವಿತರಣೆಯನ್ನು ಮಾಡಿದ್ದಾರೆ. ಮುಖ್ಯ ಅತಿಥಿಗಳಾಗಿ ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷ ಪುಂಡಲೀಕ್ ಕಾಮತ್, ತಾಲೂಕು ಪಂಚಾಯತ್ ಸದಸ್ಯೆ ವಿಜಯಲಕ್ಷ್ಮೀ ಶೆಟ್ಟಿ ,ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಪವಿತ್ರ ಸುನೀಲ್, ಮಾಜಿ ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಮಜೀದ್, ನಿವೃತ ಆರೋಗ್ಯಧಿಕಾರಿ ಕ್ರಷ್ಣ ರಾವ್ ಗಂಜಿಮಠ , ಮಾಜಿ ಮಂಡಲ ಪಂಚಾಯತ್ ಸದಸ್ಯೆ ಸುಧಾಕರ ಕುಲಾಲ್, ಪ್ರಗತಿಪರ ಕ್ರಷಿಕ ಮೋಹನ್ ದಾಸ್ ನಾಯ್ಕ್, ಗ್ರಾಮ ಪಂಚಾಯತ್ ಸದಸ್ಯರಾದ ಆರ್ ಎಸ್ ಝಾಕೀರ್ , ಜಯ ಕುಲಾಲ್ , ಲೋಕಯ್ಯ ಕೊಟ್ಟಾರಿ, ಪದ್ಮಿನಿ ಭಾಸ್ಕರ ಭಟ್, ರಾಜು ಶೆಟ್ಟಿ, ವಸಂತ ಭಂಡಾರಿ, ಬಾಬು ಸಾಮಾನಿ,ಮನೀಶ್ ಡಿ.ಶೆಟ್ಟಿ, ಮುಖ್ಯ ಶಿಕ್ಷಕರಾದ ಓಸ್ವಲ್ಡ್ ರೋಡ್ರಿಗಸ್ ಮತ್ತು ಗಂಗಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ30 ವಿಪಿ ಮೊದಿನ್ ಭಾವ

















