ಬಿ ಸಿ ರೋಡು :ಬಂಟ್ವಾಳ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದ್ದು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ರಾಷ್ಟ್ರ ಧ್ವಜಾರೋಹಣ ಗೈದರು, ನಂತರ ಪೊಲೀಸ್, ಗೃಹ ರಕ್ಷಕ ದಳ,ಎನ್.ಸಿ.ಸಿ, ಭಾರತ ಸೇವಾದಳ, ಸ್ಕೌಟ್ ಗೈಡ್ಸ್, ಕಬ್ ಗೈಡ್ಸ್ ಬುಲ್ ಬುಲ್ ವಿವಿಧ ತುಕಡಿಗಳ ಪಥ ಸಂಚಲನ ನಡೆಯಿತು.
ಬಂಟ್ವಾಳ ಪುರಸಭೆ ವ್ಯಾಪ್ತಿಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕನ್ನಡ ರಾಜ್ಯೋತ್ಸವ ದಿನಾಚರಣೆಯ ಮಹತ್ವದ ಬಗ್ಗೆ
ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಮಾತನಾಡಿದರು, ಪ್ರಧಾನ ಭಾಷಣಕಾರರಾಗಿ ಶ್ರಿ ಮಹಾಬಲೇಶ್ವರ ಹೆಬ್ಬಾರ್ ನಿವೃತ್ತ ಮಖ್ಯೋಪಾಧ್ಯಾಯರು ದೀಪಿಕಾ ಪ್ರೌಢಶಾಲೆ ಮೊಡಂಕಾಪು ಅವರು ಕನ್ನಡ ರಾಜ್ಯೋತ್ಸವ ದ ಪ್ರಧಾನ ಭಾಷಣ ನಿರ್ವಹಿಸಿದರು.



