ಬಂಟ್ವಾಳ: ಅಂತರಾಷ್ಟ್ರೀಯ ಮಾದಕ ದ್ರವ್ಯ ಹಾಗೂ ಸಾಗಾಟ ವಿರೋಧಿ ದಿನ ಆಚರಣೆ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಕಾವಳಪಡೂರು ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯಗಾರ ಆಯೋಜಿಸಿದ್ದು, ಸದ್ರಿ ಕಾರ್ಯಗಾರದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ನಾಗರಾಜ್. ಹೆಚ್.ಇ ರವರು ಪ್ರಾಸ್ತವಿಕ ಭಾಷಣ, ಬಿ.ಸಿ.ರೋಡ್ ಮಾಸ್ಟರ್ ಟ್ಯುಟೇರಿಯಲ್ನ ಮ್ಯಾನೆಜಿಂಗ್ ಟೈರೆಕ್ಟರ್/ ಪ್ರಿನ್ಸಿಪಲ್ ಶ್ರೀಮಾನ್ ಶ್ರೀ ಬಿ. ವೆಂಕಟೇಶ್ ನಾಯಕ್ ರವರು ಸಂಪನ್ಮೂಲ ವ್ಯಕ್ತಿಯಾಗಿ, ಕಾಲೇಜಿನ ಪ್ರಾಂಶುಪಾಲರಾದ ಶ್ರೀಮಾನ್ ಮರಿಸ್ವಾಮಿ ರವರು ಅಧ್ಯಕ್ಷರಾಗಿ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಶ್ರೀಮಾನ್ ಪಿ. ಜಿನರಾಜ ಆರಿಗ ರವರು ಹಾಗೂ ಕಾಲೇಜಿನ ವಿದ್ಯಾಥರ್ಿ – ವಿಧ್ಯಾಥರ್ಿನಿಯರು ಮತ್ತು ಪೋಷಕರು, ಸಾರ್ವಜನಿಕರು ಕಾರ್ಯಗಾರದಲ್ಲಿ ಹಾಜರಿದ್ದರು. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ನಾಗರಾಜ್. ಹೆಚ್.ಇ ರವರು ಮತ್ತು ಬಿ.ಸಿ.ರೋಡ್ ಮಾಸ್ಟರ್ ಟ್ಯುಟೇರಿಯಲ್ನ ಮ್ಯಾನೆಜಿಂಗ್ ಟೈರೆಕ್ಟರ್/ ಪ್ರಿನ್ಸಿಪಲ್ ಶ್ರೀಮಾನ್ ಶ್ರೀ ಬಿ. ವೆಂಕಟೇಶ್ ನಾಯಕ್, ರವರು ಮಾದಕ ದ್ರವ್ಯದ ದುಷ್ಪರಿಣಾಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಿರುತ್ತಾರೆ. ಈ ಸಮಯ ಮಾದಕ ದ್ರವ್ಯ ವಿರೋಧಿ ದಿನ ಆಚರಣೆ ಬಗ್ಗೆ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಪ್ರತಿಜ್ಞಾ ವಿಧಿಯನ್ನು ಬಿ.ಸಿ.ರೋಡ್ ಮಾಸ್ಟರ್ ಟ್ಯುಟೇರಿಯಲ್ನ ಮ್ಯಾನೆಜಿಂಗ್ ಟೈರೆಕ್ಟರ್/ ಪ್ರಿನ್ಸಿಪಲ್ ಶ್ರೀಮಾನ್ ಶ್ರೀ ಬಿ. ವೆಂಕಟೇಶ್ ನಾಯಕ್ ರವರು ಭೋದಿಸಿದರು. ಕಾರ್ಯಕ್ರಮವನ್ನು ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಶಾಂತಿ ರವರು ನಿರೂಪಿಸಿದ
