ಕೈಕಂಬ: ಸಾಮಾಜಿಕ ಜಾಲತಾಣದಲ್ಲಿ ಶ್ರೀ ಕಟೀಲು ದುರ್ಗೆಯ ಅವಹೇಳನಕಾರಿ ಪ್ರಕಟನೆಯಿಂದ ನೊಂದ ಭಕ್ತಾದಿಗಳು ಮಂಚಿಯಿಂದ ಕೆಯ್ಯೂರು ನಾರಾಯಣ ಭಟ್ ರವರ ನೇತೃತ್ವದಲ್ಲಿ ನಡೆದ ಬೈಕ್ ರ್ಯಾಲಿ ಪೊಳಲಿ ಶ್ರೀ ರಾಜ ರಾಜೇಶ್ವರೀ ದೇವಸ್ಥ್ಥಾನಕ್ಕೆ ಬಂದು, ಅಲ್ಲಿಂದ ಆಡಳಿತ ಮೋಕೇಸ್ತರ ಅಮುಂಜೆ ಗುತ್ತು ಡಾ| ಮಂಜಯ್ಯ ಶೆಟ್ಟಿ, ಮೋಕ್ತೇಸರ ಉಳಿಪಾಡಿ ಗುತ್ತು ತಾರಾನಾಥ, ದೇವಳದ ಕಾರ್ಯನಿರ್ವಹಣಾ ಅಧಿಕಾರಿ ಬೈಕ್ ರ್ಯಾಲಿಗೆ ಶುಭ ಕೋರಿದರು.

ಪೊಳಲಿಯಿಂದ ರಾಮಕೃಷ್ಣ ತಪೋವನಕ್ಕೆ ಹೊರಟ ರ್ಯಾಲಿ ವಿವೇಕಾನಂದ ರಸ್ತೆಯ ಮೂಲಕ ಕೈಕಂಬ, ಸುಂಕದಕಟ್ಟೆ, ಬಜಪೆ ಮಾರ್ಗವಾಗಿ ಸಾಗಿ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಈ ರ್ಯಾಲಿಯಲ್ಲಿ ನೂರಾರು ಬೈಕ್ ಗಳು ಪಾಲ್ಗೊಂಡವು.

