ವಿಶ್ವ ಹಿಂದೂ ಪರಿಷದ್ ವಿಟ್ಲ ಇದರ ಆಶ್ರಯದಲ್ಲಿ ನಡೆಯುವ 35 ನೇ ವರ್ಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಜಿತೇಂದ್ರ ಕೊಟ್ಟಾರಿ ಮಂಗಳೂರು ಇವರು ಧಾರ್ಮಿಕ ಉಪನ್ಯಾಸ ನೀಡಿದರು. ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸುದರ್ಶನ ಪಡಿಯಾರ್ ಅಧ್ಯಕ್ಷತೆ ವಹಿಸಿದ್ದರು. ರಮಾನಾಥ ದೇವಾಡಿಗ, ಮಂಗೇಶ್ ಭಟ್, ದಿನಕರ ಭಟ್, ಅರುಣ್ ವಿಟ್ಲ, ವಿಶ್ವನಾಥ ಗೌಡ ಬಿ. ಹರೀಶ್ ಕೆ ಉಪಸ್ಥಿತರಿದ್ದರು.

