ಮುಂಬಯಿ : ಆರತಿ ಆರ್ಟ್ ಪ್ರಿಂಟರ್ಸ್ ನ ಮಾಲಕ, ಕುಲಾಲ ಸಂಘ ಮುಂಬಯಿಯ ಗೌರವ ಅಧ್ಯಕ್ಷ, ಮುಂಬಯಿ ಮಹಾನಗರದ ತುಳು ಕನ್ನಡಿಗರ ಆತ್ಮೀಯ ವ್ಯಕ್ತಿ ಪಿ. ಕೆ, ಸಾಲ್ಯಾನ್ ಅವರು ಜು. 20 ರಂದು ಸ್ವರ್ಗಸ್ಥರಾಗಿದ್ದು ಜು. 29 ರಂದು ಮಾಟುಂಗಾದ ಸಮರಸ ಭವನದಲ್ಲಿ ನೂರಾರು ತುಳು, ಕನ್ನಡಿಗರ ಸಂಘಟನೆಗಳ ಪ್ರಮುಖರ ಉಪಸ್ಥಿತಿಯಲ್ಲಿ ಶ್ರಧಾಂಜಲಿ ಅರ್ಪಿಸಲಾಯಿತು. ಸಭೆಯಲ್ಲಿ ಮಾತನಾಡಿದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯ ಕೃಷ್ಣ ಶೆಟ್ಟಿಯವರು ದಿವಂಗರರಿಗೆ ಶ್ರಧಾಂಜಲಿ ಅರ್ಪಿಸುತ್ತಾ “ಪಿ.ಕೆ. ಸಾಲ್ಯಾನರು ಕನ್ನಡ ಬಾಷೆಯ ಉಳಿವುಗಾಗಿ ದುಡಿಯುದರೊಂದಿಗೆ, ಕುಲಾಲ ಸಮುದಾಯದ ಏಳಿಗೆಗಾಗಿ ದುಡಿದವರು. ಅವರು ಕುಲಾಲ ಸಮಾಜದ ಬಂಗಾರದ ಮನುಷ್ಯನಂತೆ” ಎಂದರು.
ಹಿರಿಯ ಕನ್ನಡಿಗ ಎಂ. ಡಿ. ಶೆಟ್ಟಿಯವರು ನುಡಿ ನಮನ ಸಲ್ಲಿಸುತ್ತಾ ಸಾಲ್ಯಾನರ ಹಾಗೂ ತನ್ನ ಸೋದರ ಬಾಂದವ್ಯದ ಬಗ್ಗೆ ಮಾತನಾಡಿ ಹತ್ತಿರದ ಬಂಧುವೊಬ್ಬನನ್ನು ಕಳಕೊಂಡಿರುವೆನು ಎಂದರು.
ಕುಲಾಲ ಸಮಾಜದ ಅಧ್ಯಕ್ಷ ಗಿರೀಶ್ ಸಾಲ್ಯಾನ್ ಅವರು ಕುಲಾಲ ಸಮಾಜದ ಅಭಿವೃದ್ದಿಗೆ ಸಾಲ್ಯಾನರ ಕೊಡುಗೆಯನ್ನು ಸ್ಮರಿಸಿದರು ಹಾಗೂ ಅವರ ಬಹುಕಾಲದ ಕನಸನ್ನು ಪೂರೈಸುವಲ್ಲಿ ನಮ್ಮ ಪ್ರಯತ್ನ ಸದಾ ಇದೆ ಎಂದರು.
ಮೈಸೂರು ಅಸೋಷಿಯೇಶನಿನ ಟ್ರಸ್ಟಿ ಮಂಜುನಾಥಯ್ಯ, ಮೊಗವೀರ ಬ್ಯಾಂಕಿನ ಕಾರ್ಯಾಧ್ಯಕ್ಷ ಸದಾನಂದ ಕೋಟ್ಯಾನ್, ಕರ್ನಾಟಕ ಸಂಘದ ಕಾರ್ಯದರ್ಶಿ ಭರತ್ ಕುಮಾರ್ ಪೊಲಿಪು, ಬಾಂಬೇ ಬಂಟ್ಸ ಅಸೋಷಿಯೇಶನಿನ ಉಪಾಧ್ಯಕ್ಷ ಸುಭಾಶ್ ಶೆಟ್ಟಿ, ಪತ್ರಕರ್ತ ಅಶೋಕ್ ಸುವರ್ಣ, ತೀಯಾ ಸಮಾಜದ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ಬಿಲ್ಲವ ಜಾಗೃತಿ ಬಳಗದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ಮಾಜಿ ಕಾರ್ಯದರ್ಶಿ ಕೇಶವ ಕೋಟ್ಯಾನ್, ಬಿಲ್ಲವರ ಅಶೋಷಿಯೇಶನಿನ ಸ್ಥಳೀಯ ಸಮಿತಿ ಗೌರವಾಧ್ಯಕ್ಷ ಗೋಪಾಲ ಪಾಲನ್, ಡಾ. ಮಂಜುನಾಥಯ್ಯ, ವಿದ್ಯಾದಾಯಿನಿ ಸಭಾದ ಗೌ. ಅಧ್ಯಕ್ಷ ಧಮೇಶ್ ಸಾಲ್ಯಾನ್, ಜಯಕರ ಪೂಜಾರಿ, ಜಿ. ಟಿ. ಆಚಾರ್ಯ, ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಜಿ. ಎಸ್. ನಾಯಕ್, ರಘುನಾಥ ಕುಂದರ್, ದೇವಾಡಿಗ ಸಂಘದ ಅಧ್ಯಕ್ಷ ವಾಸು ದೇವಾಡಿಗ, ಕೆ. ಕೆ. ಶೆಟ್ಟಿ, ಭಂಡಾರಿ ಸೇವಾ ಸಂಘದ ಅಧ್ಯಕ್ಷ ಶೇಖರ್ ಭಂಡಾರಿ, ಗುರುತು ಮಾಸಿಕದ ಸಂಪಾದಕ ಬಾಬು ಶಿವ ಪೂಜಾರಿ, ಮಹಾರಾಷ್ಟ್ರ ಕನ್ನಡ ಕಲಾವಿದರ ಪರಿಷತ್ತಿನ ಅಧ್ಯಕ್ಷ ಸುರೇಂದ್ರಕುಮಾರ್ ಹೆಗ್ಡೆ, ಶೇಖರ ಅಮೀನ್, ದಯಾಸಾಗರ ಚೌಟ, ವೀರ ಕೇಶರಿ ಕಲಾವೃಂದದ ಅಧ್ಯಕ್ಷ ರಮೇಶ್ ಶೆಟ್ಟಿ ಪಯ್ಯಾರ್, ಕೆ. ಎಂ. ಕೋಟ್ಯಾನ್ ಮೊದಲಾದವರು ಮಾತನಾಡಿ ನುಡಿ ನಮನ ಸಲ್ಲಿಸಿದರು.
ವಿವಿಧ ಸಂಘಟನೆಗಳ ಸದಸ್ಯರುಗಳು ಪದಾಧಿಕಾರಿಗಲು ಈ ಸಭೆಯಲ್ಲಿ ಉಪಸ್ಥಿತರಿದ್ದು ದಿ. ಪಿ. ಕೆ. ಸಾಲ್ಯಾನ್ ರ ಭಾವಚಿತ್ರಕ್ಕೆ ಪುಪ್ಷಾಂಜಲಿ ಸಮರ್ಪಿಸಿದರು. ದೇವದಾಸ್ ಸಾಲ್ಯಾನ್ ಅವರು ದಿವಂಗತರ ಬದುಕಿನ ಬಗ್ಗೆ ಮಾಹಿತಿ ನೀಡಿದರು. ಪತ್ರಕರ್ತ ದಿನೇಶ್ ಕುಲಾಲ್ ನಿರ್ವಹಿಸಿದರು.
ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್




