ಕೈಕಂಬ: ಭ್ರಾಮರಿ ಯುವಕ ಸಂಘ ಕಿನ್ನಿಕಂಬಳ ಇದರ 2016-17ನೇ ಸಾಲಿನ ಮಹಾಸಭೆಯು ಜು.24ರಂದು ಭಾನುವಾರ ಸಂಘದ ಕಛೇರಿಯಲ್ಲಿ ಜರುಗಿತು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಭವಾನಿ ಶಂಕರ ದೇವಾಡಿಗ ಅವರನ್ನು ಆಯ್ಕೆ ಮಾಡಲಾಯಿತು. ಗೌರವಧ್ಯಕ್ಷರಾಗಿ ಭವಾನಿ ಶಂಕರ ಆಚಾರ್ಯ, ಕಾರ್ಯದರ್ಶಿ ಸತ್ಯನಾರಾಯಣ ಭಟ್, ಹಾಗೂ ಪ್ರತಾಪ್ ಭಂಡಾರಿ, ವಾದಿರಾಜ ಕಲ್ಲೂರಾಯ ಇವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸತ್ಯನಾರಾಯಣ ಭಟ್ ಸ್ವಾಗತಿಸಿ, ಭವಾನಿ ಶಂಕರ್ ದೇವಾಡಿಗ ಸಂಘದ ಕಾರ್ಯಚಟುವಟಿಕೆಗಳ ವಿಷಯ ಪ್ರಸ್ತಾಪಿಸಿದರು.
2016-17ನೇ ಸಾಲಿನ ಗೌರವಾಧ್ಯಕ್ಷರಾಗಿ ಭವಾನಿ ಶಂಕರ ಆಚಾರ್ಯ, ಅಧ್ಯಕ್ಷರಾಗಿ ಶಂಕರ ದೇವಾಡಿಗ, ಉಪಧ್ಯಾಕ್ಷರಾಗಿ ವಿಶ್ವನಾಥ ಪಟ್ಲಚ್ಚಿಲ್, ಕಾರ್ಯದರ್ಶಿಯಾಗಿ ಪ್ರಸಾದ್ ಕೆ, ಜತೆ ಕಾರ್ಯದರ್ಶಿಯಾಗಿ ರೋಹಿತ್ ಕೆ.ಎಸ್. ಕೋಶಾಧಿಕಾರಿಯಾಗಿ ಗೋಪಾಲ್ ಎಚ್, ಕ್ರೀಡಾ ಕಾರ್ಯದರ್ಶಿಯಾಗಿ ಶ್ರೀನಿವಾಸ್ ದೇವಾಡಿಗ ಇವರನ್ನು ನೂತನ ಪಧಾದಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರು ಸಂಘದ ಅಭಿವೃದ್ಧಿಗೆ ಸಂಘದ ಸದಸ್ಯರೆಲ್ಲರೂ ಸಹಕರಿಸಬೇಕೆಂದು ತಿಳಿಸಿದರು. ಪ್ರಸಾದ್ ಕೆ. ಧನ್ಯವಾದ ವಿತ್ತರು.
