ಬಂಟ್ವಾಳ: ಬಿ.ಸಿ.ರೋಡಿನ ವೃತ್ತದ ಬಳಿ ಬಂಟ್ವಾಳ ಲೊಕೋಪಯೋಗಿ ಇಲಾಖೆ ಖಾಸಗಿ ಜಮೀನಿನಲ್ಲಿ ಸಂಗ್ರಹಿಸಿರುವ ಮರಳು ಸಂಗ್ರಹಣಾ ಕೇಂದ್ರದಿಂದ ಮರಳು ವಿತರಣೆಯನ್ನು ಗುರುವಾರ ಆರಂಭಿಸಿದೆ. ಉದ್ಯಮಿ ಅಶೋಕ್ ಬರಿಮಾರು ಅವರ ಉಪಸ್ಥಿತಿಯಲ್ಲಿ ಪ್ರಥಮ ಗ್ರಾಹಕರಾದ ತುಮಕೂರು ಲಾರಿ ಮಾಲಕರ ಸಂಘದ ಅಧ್ಯಕ್ಷರಿಗೆ ಮರಳು ಸಾಗಾಣಿಕಾ ಪರ್ಮಿಟ್ ನೀಡುವ ಮೂಲಕ ವಿತರಣೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಲೋ.ಇ.ಉಪ ವಿಭಾಗದ ಎ.ಇ.ಇ. ಉಮೇಶ್ ಭಟ್, ಎಂಜಿನಿಯರ್ ಅರುಣ್ ಪ್ರಕಾಶ್ ಹಾಗೂ ಐ ಸರ್ಚ್ ಸಂಸ್ಥೆಯ ಅಧಿಕಾರಿ ಉಪಸ್ಥಿತರಿದ್ದರು. 
