ವಾಮಂಜೂರು: ಶ್ರಮಿಕ ಸಂತ ಜೋಸೆಫ್ ವಾಮಂಜೂರು ಇಲ್ಲಿ ಮೇ 1ರಂದು ಶ್ರಮಿಕ ಸಂತ ಜೋಸೆಫ ಹಬ್ಬವನ್ನು ಆಚರಿಸಲಾಯಿತು. ಪ್ರಾಧಾನ ಗುರುಗಳಾದ ಫಾ. ಅಶ್ವಿನ್ ಡಿ ಸಿಲ್ವಾ ಇವರೊಂದಿಗೆ ಚರ್ಚನ ಮಾಹಾ ಗುರುಗಳಾದ ಸಿಪ್ರಿಯಾನ್ ಪಿಂಟೊ ಹಾಗೂ ಸಿಟಿ ವಾರಾಡೊ ಚರ್ಚ್ ನ ಎಲ್ಲಾ ಗುರುಗಳು ದಿವ್ಯ ಬಲಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ವಾಮಂಜೂರು ಚರ್ಚ ನಲ್ಲಿ ಆರು ತಿಂಗಳಿನಿಂದ ದಿಯಾ ಕೋನ್ ಆಗಿ ಸೇವೆ ಸಲ್ಲಿಸಿ ಇಂದಿನ ಬಲಿಪೂಜೆಯ ಪ್ರಧಾನ ಗುರುಗಳಾದ ಅಶ್ವಿನ್ ಡಿ. ಸಿಲ್ವಾ ಅವರು ಗುರು ದೀಕ್ಷೆಯನ್ನು ಪಡೆದುಕೊಂಡರು ರೋಶನ್ ಎಮ್ ಕಾಮತ್,ಜೋಕಿಮ್ ಡಿ ಸೋಜ, ಜೀನಾ ಡಿ”ಸೋಜ, ಸಿಸಿಲೀಯ ಮೆಂಡೋನ್ಸಾ ಅವರನ್ನು ಫಾ. ಅಶ್ವಿನ್ ಡಿ’ ಸಿಲ್ವಾ ಸನ್ಮಾನಿಸಿದರು. ಈಸಂದರ್ಭದಲ್ಲಿ ಚರ್ಚನ ಪಾಲನಾ ಸಮಿತಿಯ ಉಪಾಧ್ಯಕ್ಷ , ಕಾರ್ಯದರ್ಶಿ ಹಾಗೂ ಧರ್ಮಭಗಿನಿಯರು ಉಪಸ್ಥಿತರಿದ್ದರು.




