ಬಂಟ್ವಾಳ ತಾಲ್ಲೂಕಿನ ಮಾವಿನಕಟ್ಟೆ ಉದ್ಯಮಿ ಟಿ.ವರದರಾಜ ಪೈ ಅವರು ರಾಗ ಸಂಯೋಜಿಸಿದ ಕನ್ನಡ, ಹಿಂದಿ ಮತ್ತು ಕೊಂಕಣಿ ಭಕ್ತಿಗೀತೆಗಳ ಆಡಿಯೋ ಸಿಡಿಯನ್ನು ಕಾರ್ಕಳ ಕಾಶೀಮಠದಲ್ಲಿ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮಿಜಿ ಶನಿವಾರ ಬಿಡುಗಡೆಗೊಳಿಸಿದರು. ಟಿ. ರಘುನಾಥ ಪೈ, ವಾಸುದೇವ ಕಾಮತ್, ಜಿಎಸ್ಬಿ ಸಮಾಜ ಅಧ್ಯಕ್ಷ ನಾಗರಾಜ ಕಾಮತ್, ಸೊವರಿನ್ ಜನಾರ್ಧನ ಶೆಣೈ, ಶ್ರೀಪತಿ ಕಾಮತ್, ಸಿ.ಎಸ್. ಪುರಾಣಿಕ್ ಮತ್ತಿತರರು ಉಪಸ್ಥಿತರಿದ್ದರು.

