ಬಂಟ್ವಾಳ: ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದ ಸಜೀಪಮುನ್ನೂರು ವಜ್ರಕಾಯ ಶಾಖೆ ಭಾನುವಾರ ಉದ್ಘಾಟನೆಗೊಂಡಿತು. ಬಜರಂಗದಳದ ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ ನೂತನ ಶಾಖೆಯನ್ನು ಉದ್ಘಾಟಿಸಿದರು.

ಜಿಲ್ಲಾ ಸಹಸಂಚಾಲಕರಾದ ಗುರುರಾಜ್ ಬಂಟ್ವಾಳ್, ಭರತ್ ಕುಮ್ಡೇಲು, ಸಜೀಪ ವಲಯ ಸಂಚಾಲಕ ದಕ್ಷಣ್, ಲೋಹಿತ್ ಪಣೋಲಿಬೈಲು ಹಾಜರಿದ್ದರು. ನೂತನ ಶಾಖೆಯ ಅಧ್ಯಕ್ಷರಾಗಿ ಪದ್ಮನಾಭ ಶಾರದನಗರ, ಸಂಚಾಲಕರಾಗಿ ವಿಶ್ವನಾಥ ನಂದಾವರ, ಸಹಸಂಚಾಲಕರಾಗಿ ಯಶ್ವಿತ್ ಮಡಿವಾಳಪಡ್ಪು, ಗೋರಕ್ಷ ಪ್ರಮುಖ್ ಆಗಿ ಗಣೇಶ್ ಮರ್ತಾಜೆ, ಸುರಕ್ಷ ಪ್ರಮುಖ್ ಆಗಿ ಕಿರಣ್ ಆಲಾಡಿ, ಸೇವಾ ಪ್ರಮುಖ್ ಆಗಿ ಮೋಹನ್ ಮರ್ತಾಜೆ, ವಿದ್ಯಾರ್ಥಿ ಪ್ರಮುಖ್ ಆಗಿ ಪ್ರಾರ್ಥನ್ ಕಾಪಿಕಾಡು, ಸಾಪ್ತಹಿಕ್ ಪ್ರಮುಖ್ ಆಗಿ ಅವಿನಾಶ್ ಆಲಾಡಿ, ಸತ್ಸಂಗ ಪ್ರಮುಖ್ ಆಗಿ ಚರಣ್ರಾಜ್ ಆಯ್ಕೆಯಾದರು.
