ಮುಂಬಯಿ, ಎ.03: ರಂಗಮಿಲನ ನಿರೆಕರೆ ಕಲಾವಿದರು ತಮ್ಮ 5ನೇ ವಾರ್ಷಿಕೋತ್ಸವನ್ನು ಇಂದಿಲ್ಲಿ ಆದಿತ್ಯವಾರ ಸಂಜೆ ಮಾಟುಂಗಾ ಪಶ್ಚಿಮದಲ್ಲಿನ ಕನರ್ಾಟಕ ಸಂಘ ಮುಂಬಯಿ ಇದರ ಡಾ| ಎಂ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಸಂಭ್ರಮಿಸಿತು. ಕನ್ನಡ ಕಲಾಕೇಂದ್ರ ಮುಂಬಯಿ ಅಧ್ಯಕ್ಷ ಬೈಲೂರು ಬಾಲಚಂದ್ರ ರಾವ್ ಅಧ್ಯಕ್ಷತೆಯಲ್ಲಿ ಜರುಗಿದ ವಾರ್ಷಿಕೋತ್ಸವ ಸಮಾರಂಂಭಕ್ಕೆ ಮಹಾನಗರದಲ್ಲಿನ ಉದ್ಯಮಿ, ಬಂಟ್ಸ್ ಸಂಘ ಮುಂಬಯಿ ಇದರ ಜತೆ ಕೋಶಾಧಿಕಾರಿ ಮಹೇಶ್ ಎಸ್.ಶೆಟ್ಟಿ ದೀಪ ಪ್ರಜ್ವಲಿಸಿ ಚಾಲನೆಯನ್ನೀಡಿದರು. ಸಾಂತೂರು ಸಾಂತಿಂಜ ಜನಾರ್ಧನ ಭಟ್ ಆಶೀರ್ವಚನಗೈದರು.
ಗೌರವಾನ್ವಿತ ಅತಿಥಿಗಳಾಗಿ ನ್ಯಾಯವಾದಿ ಬಿ.ಮೊಹಿದ್ದೀನ್ ಮುಂಡ್ಕೂರು, ಚಿತ್ರಾ ಆರ್.ಶೆಟ್ಟಿ ಕಲ್ಯಾಣ್, ಅನಿಲ್ ಎಸ್.ಶೆಟ್ಟಿ ಎಳಿಂಜೆ, ದಯಾನಂದ ಪೂಜಾರಿ ಕಲ್ವಾ, ಪ್ರಭಾಕರ ಹೆಗ್ಡೆ ನವಿಮುಂಬಯಿ, ಶೇಖರ್ ಪಿ.ಶೆಟ್ಟಿ ದಹಿಸರ್, ಮೋಹನ್ದಾಸ್ ಎ.ಪೂಜಾರಿ, ನಿಲೇಶ್ ಪೂಜಾರಿ ಪಲಿಮಾರು, ಶೇಖರ್ ಶೆಟ್ಟಿ ವಾಮದಪದವು, ಸಂತೋಷ್ ಹೆಗ್ಡೆ ಅಜೆಕಾರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅತಿಥಿವರ್ಯರು ರಂಗಭೂಮಿಯ ಹಿರಿಯ ಕಲಾವಿದ, ಕವಿ, ಬಹುಮುಖಿ ಸಾಹಿತಿ ಮೊಹಮ್ಮದ್ ಬಡ್ಡೂರು ಅವರಿಗೆ `ಅಭಿನವ ದ್ರೋಣಾಚಾರ್ಯ’ ಬಿರುದು ನೀಡಿ, ಪ್ರಿಯಾ ಸರೋಜಾದೇವಿ ಅವರಿಗೆ `ಅಭಿನಯ ಭಾರ್ಗವಿ’ ಬಿರುದು ಪ್ರದಾನಿಸಿ ಸನ್ಮಾನಿಸಿದರು ಮತ್ತು ಡಾ| ಶಿವ ಮೂಡಿಗೆರೆ ಹಾಗೂ ಕು| ಅಪೇಕ್ಷಾ ವಿ.ಶೆಟ್ಟಿ ಅವರಿಗೆ ಗೌರವಾರ್ಪಣೆಗೈದು ಅಭಿನಂದಿಸಿದರು ಹಾಗೂ ಕಲಾವಿದರ ಸಂಸ್ಥೆಯ ಸದಸ್ಯರುಗಳ ಮಕ್ಕಳಿಗೆ ವಿದ್ಯಾಥರ್ಿ ವೇತನ ವಿತರಿಗೆ ಶುಭಾರೈಸಿದರು.
ನಿರೆಕರೆ ಕಲಾವಿದರ ಸಂಸ್ಥೆಯ ಅಧ್ಯಕ್ಷ ಮನೋಹರ್ ಶೆಟ್ಟಿ ನಂದಳಿಕೆ ಸ್ವಾಗತಿಸಿದರು. ಉಮೇಶ್ ಹೆಗ್ಡೆ ಕಡ್ತಳ ಪ್ರಸ್ತಾವಿಕ ನುಡಿಗಳನ್ನಾಡಿದರು. ಕೋಶಾಧಿಕಾರಿ ಗಣೇಶ್ ರಾವ್ ಪಡುಬಿದ್ರಿ, ಜತೆ ಕಾರ್ಯದಶರ್ಿ ಶುಭಾಂಗಿ ಎಸ್.ಶೆಟ್ಟಿ, ಜೊತೆ ಕೋಶಾಧಿಕಾರಿ ಕಿಶೋರ್ ಶೆಟ್ಟಿ ಪಿಲಾರು ಹರೀಶ್ ಪೂಜಾರಿ ಕಾಸರಗೋಡು, ಶ್ರೀಕಾಂತ್ ಶೆಟ್ಟಿ ಉಡುಪಿ, ಇರ್ವತ್ತೂರು ಸುರೇಶ್ ಪೂಜಾರಿ, ಸುರೇಶ್ ಶೆಟ್ಟಿ ನಿಟ್ಟೆ ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಉಪಾಧ್ಯಕ್ಷೆ ಹರಿಣಿ ಎಸ್.ಶೆಟ್ಟಿ ಕಾಪು, ಪ್ರತಿಭಾ ಬಂಗೇರ, ಸನ್ಮಾನಿತರನ್ನು ಪರಿಚಯಿಸಿದರು. ರಂಗಕಮರ್ಿ ನಾಗರಾಜ್ ಗುರುಪುರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದಶರ್ಿ ರಹೀಂ ಸಚ್ಚರಿಪೇಟೆ ಧನ್ಯವದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ರಂಗಮಿಲನ ನಿರೆಕರೆ ಕಲಾವಿದರು ಪ್ರಬುದ್ಧ ಕಲಾವಿದರ ಕೂಡುವಿಕೆಯಲ್ಲಿ ವೀರಜ್ ನಂದಿಕೂರು ರಚಿಸಿದ, ಮನೋಹರ್ ಶೆಟ್ಟಿ ನಂದಳಿಕೆ ನಿದರ್ೆಶನದ `ಆಯಿನ ಆಂಡ್ ಬುಡ್ದ್ ಬಡ್ಲೆ’ ತುಳು ನಾಟಕ ಪ್ರದಶರ್ಿಸಿದರು.
















