ಬಂಟ್ವಾಳ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ದ.ಕ. ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಇಂದ್ರಧನುಷ್ ಅಭಿಯಾನ-2015ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಬಂಟ್ವಾಳದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಆರೋಗ್ಯ ಇಲಾಖೆಯ ವತಿಯಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಂಕ್ರಮಿಕ ರೋಗಗಳನ್ನು ನಿರ್ಮೂಲಗೊಳಿಸಲು ಸಾಧ್ಯವಿದೆ. ಈ ಹಿಂದೆ ಸಿಡುಬು ರೋಗ ಹಾಗೂ ಪೊಲೀಯೋ ರೋಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮಗಳನ್ನು ನಡೆಸಿ ರೋಗ ನಿಯಂತ್ರಣ ಮಾಡಲಾಗಿದೆ ಎಂದರು. ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾನಗೊಳ್ಳುತ್ತಿದ್ದು ಶವಗಾರ, ಅಡುಗೆ ಕೊಠಡಿ ಹಾಗೂ ಡಯಾಲಿಸಿಸ್ ಕೊಠಡಿಗಳಿಗೆ ಅನುದಾನದ ಕೊರೆತೆ ಇದ್ದು ಅದನ್ನು ಪೂರೈಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಕಾರದೊಂದಿಗೆ ಎಂಆರ್ಪಿಎಲ್, ಎನ್ಎಂಪಿಟಿ ಹಾಗೂ ಕೆಎಸ್ಹೆಗ್ಡೆ ಆಸ್ಪತ್ರೆಯ ಸಿಎಸ್ಆರ್ ಫಂಡ್ನ ನೆರವಿನಿಂದಿಗೆ 23 ಲಕ್ಷವನ್ನು ಆಸ್ಪತ್ರೆಗೆ ದೇಣಿಗೆಯಾಗಿ ನೀಡಲಾಗಿದೆ ಎಂದರು. ಇದೇ ಸಂದರ್ಭ ದೇಣಿಗೆಯ ಚೆಕನ್ನು ಕೆಎಚ್ಎಸ್ಆರ್ಡಿಪಿಯ ಅಧಿಕಾರಿಗೆ ಹಸ್ತಾಂತರಿಸಿದರು. ಬಳಿಕ ನವ ಶಿಶುಗಳಿಗೆ ಸಚಿವರು ಲಸಿಕೆ ಹಾಕಿದರು.

ಈ ಸಂದರ್ಭ ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಕೃಷ್ಣ ರಾವ್, ಮಂಗಳೂರು ಸಹಾಯಕ ಆಯುಕ್ತ ಡಾ. ಅಶೋಕ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್, ಕೆಎಚ್ಎಸ್ಡಿಆರ್ಪಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ರಘುಚಂದ್ರ ಹೆಬ್ಬಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.
