ಬಜಪೆ: ಮುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಲಲಿತಾ.ಕೆ ವರ್ಗಾವಣೆಗೊಂಡ ಉಪನ್ಯಾಸಕರಾದ ರೂಪಾ ಹಾಗೂ ವಿನೋದಾ ಅವರಿಗೆ ಬೀಳ್ಕೊಡುಗೆ ಸನ್ಮಾನ ಕಾರ್ಯಕ್ರಮ ಗುರುವಾರ ನಡೆಯಿತು.
ಇದೇ ಸಂದರ್ಭದಲ್ಲಿ ಪೋಲ್ವಾಲ್ಟ್ ಕ್ರೀಡೆಯಲ್ಲಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಕಾಲೇಜಿನ ವಿದ್ಯಾರ್ಥಿನಿ ರಕ್ಷಿತಾ ಹಾಗೂ ದೈಹಿಕ ಶಿಕ್ಷಣ ತರಬೇತುದಾರರಾದ ದರ್ಶನ್ ಅವರನ್ನು ಅಭಿನಂದಿಸಲಾಯಿತು.
ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಿರಣ್ಯಾಕ್ಷ ಕೋಟ್ಯಾನ್, ಎಸ್.ಡಿ.ಎಂ.ಸಿ ಅರ್ಧಯಕ್ಷ ಚಂದ್ರಹಾಸ ಶೆಟ್ಟಿ , ಜೆರಾಲ್ಡ್ ಪಿಂಟೋ, ಅಬ್ದುಲ್ ಬಶೀರ್, ಪ್ರಶಾಂತಿ, ಬಿ.,ಬಿ ಶಿವಣ್ಣ ಮುಂಥಾದವರು ಉಪಸ್ಥಿತರಿದ್ಧರು.
ಕಾಲೇಜಿನ ಪ್ರಿನ್ಸಿಪಲ್ ನಿರಂಜನ್ ಎ. ಅಭಿನಂದನಾ ಮಾತುಗಳನ್ನಾಡಿದರು.
ಚಿತ್ರ 26ವಿಎಂ ಸನ್ಮಾನ
